

ಶ್ರೀನಿವಾಸಪುರ : ತಾಲ್ಲೂಕಿನ ಗೌಡತಾತನಗಡ್ಡ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಾಗಿ ಚಲಪತಿ , ಜಯಮ್ಮ , ಭಾರತಮ್ಮ , ಮುನಿಶಾಮಿ , ರವಣಪ್ಪ , ವೆಂಕಟಕೃಷ್ಣಪ್ಪ , ಜಿ.ಎನ್.ಶ್ರೀನಿವಾಸ್ , ವೆಂಕಟಮ್ಮ , ನಾರಾಯಣಸ್ವಾಮಿ , ಶ್ರೀರಾಮ್ , ಲಕ್ಷ್ಮೀದೇವಿ , ಪದ್ಮಾವತಿ ಅವಿರೋಧ ಆಯ್ಕೆಯಾಗಿದ್ದಾರೆ . ಪರಿಶಿಷ್ಟ ಪಂಗಡದ ಮಹಿಳಾ ಅಭ್ಯರ್ಥಿ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ವೆಂಕಟಮ್ಮ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎನ್.ಶಿವಲಿಂಗಪ್ಪ ತಿಳಿಸಿದ್ದಾರೆ . ಆಯ್ಕೆ ಬಳಿಕ ಸದಸ್ಯರು ವಿಜಯೋತ್ಸವ ಆಚರಿಸಿದರು . ಮುಖಂಡರಾದ ಜಿ.ಎನ್.ಶ್ರೀನಿವಾಸರೆಡ್ಡಿ , ಮುನಿರೆಡ್ಡಿ , ಬಾಲಾವತಿ ಜಯರಾಂ , ಜಿ.ವಿ.ಜಯರಾಮರೆಡ್ಡಿ , ಚಿನ್ನಪರೆಡ್ಡಿ , ಮುನಿಸ್ವಾಮಿ ಇದ್ದರು