ಹೊಸಹುಡ್ಯದ ಸಮೀಪ ಕೋವಿಡ್ ಹರಡುವಿಕೆ ತಡೆಯುವ ಉದ್ದೇಶದಿಂದ ವಾಹನ ತಪಾಸಣೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ತಾಲ್ಲೂಕಿನ ಗಡಿ ಗ್ರಾಮ ಹೊಸಹುಡ್ಯದ ಸಮೀಪ ಪೊಲೀಸ್ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೋವಿಡ್ ಹರಡುವಿಕೆ ತಡೆಯುವ ಉದ್ದೇಶದಿಂದ ಶುಕ್ರವಾರ ವಾಹನ ತಪಾಸಣೆ ನಡೆಸಿದರು.
ಆಂಧ್ರಪ್ರದೇಶ ಹಾಗೂ ರಾಜ್ಯದ ವಾಹನಗಳನ್ನು ಗಡಿಯಲ್ಲಿ ತಡೆದು ಪರಿಶೀಲನೆ ಬಳಿಕ ಬಿಡಲಾಯಿತು. ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನ ಸವಾರರಿಗೆ ಲಾಠಿ ರುಚಿ ಮುಟ್ಟಿಸಲಾಯಿತು. ಹಾಗೂ ಕೆಲವರಿಗೆ ಮಾಸ್ಕ್ ಧರಿಸುವಂತೆ ಸಲಹೆ ನೀಡಿ ಬಿಟ್ಟುಕೊಡಲಾಯಿತು.
ಪಿಡಿಒ ಆರ್.ವಿ.ರವಿಕುಮಾರ್, ಸಹಾಯಕ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ರವಣಮ್ಮ, ಗ್ರಾಮ ಲೆಕ್ಕಾಧಿಕಾರಿ ಜಯಚಂದ್ರ, ಸಿಬ್ಬಂದಿ ಗಿರೀಶ್, ಚಲಪತಿ ಇದ್ದರು