

ಕುಂದಾಪುರ: ಜೆಸಿಐ ಕುಂದಾಪುರ ಸಿಟಿ ಯಾ ಆಶ್ರಯದಲ್ಲಿ ಕುಂದಾಪುರ ದ ಅರ್ ಎನ್ ಶೆಟ್ಟಿ ಪಿ ಯು ಕಾಲೇಜ್ ನಲ್ಲಿ ರಾಷ್ಟ್ರೀಯ ತರಬೇತಿ ಕಾರ್ಯಕ್ರಮ ವನ್ನು ವಲಯ 15 ರ ರಾಷ್ಟ್ರೀಯ ತರಬೇತುದಾರರಾದ ಅಕ್ಷತಾ ಶೆಟ್ಟಿ ಮಂಗಳೂರ್ ಇವರು ಉದ್ಘಾಟನೆ ನೆರೆವೇರಿಸಿದರು.
ಅರ್ ಎನ್ ಶೆಟ್ಟಿ ಪಿ ಯು ಕಾಲೇಜ್ ನ ಪ್ರಾಂಶುಪಾಲರಾದ ನವೀನ್ ಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳು ಪಠ್ಯ ಪುಸ್ತಕದಲ್ಲಿ ಕಾಲೇಜ್ ಗೆ ಸಂಬಂಧ ಪಟ್ಟ ವಿಷಯಗಳನ್ನು ತಿಳಿದುಕೊಳ್ಳುತ್ತಾರೆ, ಇಂದಿನ ದಿನಗಳಲ್ಲಿ ಅವರಿಗೆ ಪಠ್ಯ ಪುಸ್ತಕದ ಜೊತೆಗೆ ಬೇರೆ ಬೇರೆ ವಿಷಯ ಗಳ ಬಗ್ಗೆ ತಿಳಿದುಕೊಳ್ಳಬೇಕಿದೆ, ಈ ಸಂದರ್ಭದಲ್ಲಿ ಜೆಸಿಐ ಕುಂದಾಪುರ ಸಿಟಿ ಯಂತ ಸಂಸ್ಥೆ ಗಳು ವಿದ್ಯಾರ್ಥಿ ಜೀವನದ ಜೊತೆಗೆ ಸಾಮಾಜಿಕ, ನಾಯಕತ್ವ, ಸೇವಾ ಕಾರ್ಯಕ್ರಮ ನಡವಳಿಕೆ, ಜೀವನ ಶೈಲಿ ಇನ್ನಿತರ ವಿಷಯ ಗಳ ಬಗ್ಗೆ ತರಬೇತಿ ನೀಡುತ್ತಿರುವು ದರಿಂದ ವಿದ್ಯಾರ್ಥಿಗಳ ಜೀವನ ಶೈಲಿ ಬದಲಾವಣೆ ಮಾಡಲು ಸಾಧ್ಯ ಎಂದು ನುಡಿದರು.
ಜೇಸಿಐ ಕುಂದಾಪುರ ಸಿಟಿ ಯಾ ಅಧ್ಯಕ್ಷ ರಾದ ರಾಘವೇಂದ್ರ ಕುಲಾಲ್ ಹೆಮ್ಮಾಡಿ ಸ್ವಾಗತಿಸಿದರು,
ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ, ನಿಕಟ ಪೂರ್ವ ಅಧ್ಯಕ್ಷ ಡಾ ಸೋನಿ, ಪೂರ್ವ ಅಧ್ಯಕ್ಷ ರಾದ
ವಿಜಯ ಭಂಡಾರಿ, ಗಿರೀಶ್ ಹೆಬ್ಬಾರ್, ಲೇಡಿ ಜೇಸಿ ಸಂಯೋಜಕಿ ರೇಷ್ಮಾ ಕೋಟ್ಯಾನ್,ಸದ್ಯಸ್ಯರಾದ ಅನಿತಾ ಡಿ ಸೋಜಾ, ಜಗದೀಶ್ ಶೆಟ್ಟಿ ಹೆಮ್ಮಾಡಿ, ದಿನೇಶ್ ಕುದ್ರು ಉಪಸ್ಥಿತರಿದ್ದರು.
ಕಾಲೇಜಿನ ಉಪನ್ಯಾಸಕರಾದ ಜಯಶೀಲ ಪೈ ಕಾರ್ಯಕ್ರಮ ನಿರೂಪಿಸಿ, ವಲಯ 15 ರ ಆಡಳಿಧಿಕಾರಿ ಅಭಿಲಾಶ್ ಬಿ ಏ ವಂದಿಸಿದರು.



