ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್. ಎನ್.ದೊರೆಸ್ವಾಮಿ ವಿಧಿವಶ: ಹಲವು ಗಣ್ಯರ ಕಂಬನಿ

JANANUDI.COM NETWORK

ಬೆಂಗಳೂರು,ಮೇ.26.  ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಗಾಂಧಿ ವಾದಿ,ಕರ್ನಾಟಕ ನಾಡಿನ ಹೆಮ್ಮೆಯ ಪುತ್ರ, ನಾಡೋಜ ಡಾ. ಎಚ್. ಎಸ್. ದೊರೆಸ್ವಾಮಿ(104) ಅವರು    ಇಂದು   ಬುಧವಾರ ವಿಧಿವಶವಾದರು. ನಾಡೋಜ ಡಾ. ಎಚ್. ಎಸ್. ದೊರೆಸ್ವಾಮಿ ಸ್ವಲ್ಪ ಸಮಯದ ಹಿಂದೆ  ಕೊರೊನಾ ಸೋಕಿತರಾಗಿ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಮತ್ತೆ ಅವರು ದೈಹಿಕ ಅಸ್ವಸ್ಥತೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ವಿಫಲವಾಗಿ, ನಿಧನ ಹೊಂದಿದರು. ದೊರೆಸ್ವಾಮಿ ನಿಧನಕ್ಕೆ ಹಲವು ರಾಜಕೀಯ, ಸಾಮಾಜಿಕ ಗಣ್ಯರು ಕಂಬನಿ ಮಿಡಿದಿದ್ದಾರೆ.