

ಕುಂದಾಪುರ, ಜೂ.1; ಮೂಲತಹ ಕುಂದಾಪುರ ಬಸ್ರೂರಿನವರಾದ ಬಿಶಪ್ ಅ।ವಂ|ಡಾ|ಜೋನ್ ಕರ್ವಾಲ್ಲೊ ಇವರು ರಾಜಸ್ಥಾನದ ಆಜ್ಮೀರ್ ಧರ್ಮಪ್ರಾಂತ್ಯದಕ್ಕೆ ನೂತನ ಧರ್ಮಾಧ್ಯಕ್ಷರಾಗಿ ಅಯ್ಕೆಯಾದ ಇವರು, ಜೂ.1 ರಂದು ಕೆನರಾದಲ್ಲೆ ಅತೀ ಪ್ರಾಚೀನ ಎರಡನೇ ಇಗರ್ಜಿಯಾದ ರೋಜರಿ ಮಾತಾ ಇಗರ್ಜಿಗೆ ಭೇಟಿ ಕೊಟ್ಟು ಪವಿತ್ರ ಬಲಿದಾನವನ್ನು ಅರ್ಪಿಸಿದರು.
ಬಲಿದಾನ ಅರ್ಪಿಸಿ ಅವರು ‘ನಾವು ಮಾನವ ರಚಿಸಿದ ಕಂಪ್ಯೂಟರ್, ಮೊಬಾಯ್ಲ್ ಬಳಸುತ್ತೆವೆ, ಅದು ನಾವು ಆಜ್ಞೆ ಕೊಟ್ಟಂತೆ ಕಾರ್ಯ ನಿರ್ವಹಿಸುತ್ತವೆ, ಅವಗಳು ನಶ್ವರವಾದುವು, ಅದು ಕೆಡುತ್ತವೆ, ನಾಶವಾಗುತ್ತೇವೆ, ಆದರೆ ನಮಗೆ ಜನ್ಮ ಕೊಟ್ಟಿದು, ದೇವರು, ನಾವು ನಶ್ವರರಲ್ಲ, ನಮಗೆ ದೇವರು ಅವರಂತೆಯೇ ರಚಿಸಿದ್ದಾನೆ, ನಮಗೆ ಸ್ವಾತಂತ್ರ ಕೊಟ್ಟಿದ್ದಾನೆ, ನಮಗೆ ಅವರ ಅಧಿಕಾರ ಹಂಚಿಕೊಟ್ಟಿದ್ದಾನೆ, ಅದರೆ ನಾವು ದೇವರ ವಾಕ್ಯದಂತೆ ನ್ಯಾಯ ಸಮ್ಮತವಾಗಿ ಜೀವಿಸಬೇಕು, ದೇವರು ನಮ್ಮ ಸೇವಕನಂತೆ, ನಮ್ಮ ಮಿತ್ರರು ಆಗಿದ್ದಾರೆ, ಅವರು ನಮ್ಮನ್ನು ಅಗಾಧವಾಗಿ ಪ್ರೀತಿಸುತ್ತಾರೆ. ನಾವು ಎಲ್ಲಿಂದ ಬಂದಿದ್ದೇವೊ ಅಲ್ಲಿ ನಾವು ಮರಳಬೇಕು. ಅದಕ್ಕೆ ನಾವು ಬೈಬಲನಲ್ಲಿ ಹೇಳಿದ ಹಾಗೇ ಕ್ರಿಸ್ತನ ಬೋಧನೆಯಂತೆ ಜಿವಿಸಬೇಕು, ನಮ್ಮ ಜೀವನವೇ ಇತರರಿಗೆ ಆದರ್ಶವಾಗಬೇಕು, ಅದರಂತೆ ನಮ್ಮ ಜೀವನವೇ ಬೈಬಲ್ ಆಗಿ ಹೊರಜಗತ್ತಿಗೆ ನಾವು ತೊರ್ಪಡಿಸಬೇಕು, ಕ್ರಿಸ್ತನು ಪವಿತ್ರ ಸಭೆಯ ಶಿರವಾಗಿದ್ದಾನೆ,, ನಾವು ಅದಕ್ಕೆ ಕೈ ಕಾಲು ಕಿವಿ, ಕಣ್ಣು ಹೀಗೆ ನಮ್ಮ ಎಲ್ಲಾ ಅಂಗಾಂಗಳು ಜೊತೆಯಾಗಿದ್ದೇವೆ, ಹಾಗಾಗಿ ನಾವೆಲ್ಲ ತಮ್ಮ ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸಬೇಕು, ಇಂದು ಯೇಸು ಕ್ರಿಸ್ತರು ಪುನರುತ್ಥಾನಗೊಂಡು ಸ್ವರ್ಗಕ್ಕೆ ಎರಿ ಹೋದ ಹಬ್ಬದ ಆಚರಣೆ ಪ್ರಯುಕ್ತ ಅವರು ಸಂದೇಶ ನೀಡಿ, ನಮ್ಮ ಯುವಕ ಯುವತಿಯರು ದೇವರ ಸೇವೆ ಕೈಗೊಳ್ಳಲು ಯಾಜಕರು, ಧರ್ಮಭಗಿಯರಾಗಲು ಕರೆ ಕೊಟ್ಟರು. ರೋಜರಿ ಚರ್ಚಿನ ಧರ್ಮಗುರು ಅ।ವಂ।ಪೌಲ್ ರೇಗೊ ಸಹಬಲಿದಾನವನ್ನು ಅರ್ಪಿಸಿದರು. ಅವರು ಮತ್ತು ಪಾಲನ ಮಂಡಳಿ ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಕುಂದಾಪುರ ಸಂತ ಜೋಸೆಪ್ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಇವರುಗಳು ಚರ್ಚಿನ ಪರವಾಗಿ ಬಿಶಪ್ ಜೋನ್ ಇವರನ್ನು ಸನ್ಮಾನಿಸಿದರು. ಹಾಗೇ ಚರ್ಚಿನ ಜನತೆ ಅವರನ್ನು ಹಾರ್ಧಿಕವಾಗಿ ಅಭಿನಂದಿಸಿದರು.






































