![](https://jananudi.com/wp-content/uploads/2023/09/0-jananudi-network-editor-9.jpg)
![](https://jananudi.com/wp-content/uploads/2023/09/Rohan-City-Artwork-for-Website-1-16.9.23-3.jpg)
![](https://jananudi.com/wp-content/uploads/2023/09/IMG-20230926-WA0006-3.jpg)
ಕುಂದಾಪುರ: ಎಂಐಟಿ ಕುಂದಾಪುರದ ಪ್ರಥಮ ವರ್ಷದ ಇಂಡಕ್ಷನ್ ಕಾರ್ಯಕ್ರಮ 2023-24 ರ ಅಂಗವಾಗಿ, ಮಾಹೆ ಮಣಿಪಾಲದ ದೈಹಿಕ ಶಿಕ್ಷಣದ ಉಪನಿರ್ದೇಶಕ ಡಾ.ದೀಪಕ್ ರಾಮ್ ಬೈರಿ ಅವರಿಂದ ಫಿಟ್ನೆಸ್ ಅನ್ಪ್ಲಗ್ಡ್ ವಿಷಯದ ಕುರಿತು ಸಂವಾದವನ್ನು ಏರ್ಪಡಿಸಲಾಗಿತ್ತು. ದೈಹಿಕ ಸಾಮರ್ಥ್ಯದ ಮಹತ್ವ ಮತ್ತು ನಿರಂತರ ದೈಹಿಕ ವ್ಯಾಯಾಮದ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವ ವಿವಿಧ ವಿಧಾನಗಳನ್ನು ಅವರು ವಿದ್ಯಾರ್ಥಿಗಳಿಗೆ ವಿವರಿಸಿದರು. ನಿಯಮಿತ ವಾಕಿಂಗ್ ಅಭ್ಯಾಸದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಕೆಲವು ಶಾಲೆಗಳಲ್ಲಿ ಪಿಟಿ ಅವಧಿಯನ್ನು ಬೇರೆ ಉದ್ದೇಶಗಳಿಗೆ ಬಳಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಹರ್ಷಿತಾ ಸ್ವಾಗತಿಸಿ, ಡಾ.ರಾಮಕೃಷ್ಣ ಹೆಗಡೆ ವಂದಿಸಿದರು. ಪ್ರೊ.ಸೂಕ್ಷ್ಮ ಅಡಿಗ ಕಾರ್ಯಕ್ರಮ ಸಂಯೋಜಿಸಿದರು. MIT ಕುಂದಾಪುರದ BSH ವಿಭಾಗವು ಕಾರ್ಯಕ್ರಮವನ್ನು ಆಯೋಜಿಸಿತ್ತು.
![](https://jananudi.com/wp-content/uploads/2023/09/IMG-20230926-WA0005.jpg)