![](https://jananudi.com/wp-content/uploads/2025/02/000000-JANANUDI-4.png)
![](https://jananudi.com/wp-content/uploads/2025/02/1-34.jpg)
ಗಂಗೊಳ್ಳಿ,ಪೆ.12; ಸ್ಥಳೀಯ ಕೊಸೆಸಾಂವ್ ಅಮ್ಮನವರ ದೇವಾಲಯ ಗಂಗೊಳ್ಳಿ 9.02.2025, ಭಾನುವಾರದಂದು ಸುವಾರ್ತೆ ಪ್ರಸಾರ ಆಯೋಗದ ಮುಂದಾಳತ್ವದಲ್ಲಿ ಮಿಷನರಿ ಮೇಳದ ಜಯಂತ್ಸೋವ ನಡೆಯಿತು. ಬಲಿ ಪೂಜೆಯ ಪ್ರಾರ್ಥನಾ ವಿಧಿಯನ್ನು ಮಕ್ಕಳೇ ನೆರವೇರಿಸಿದರು. ಬಲಿ ಪೂಜೆಯ ನಂತರ ಮಕ್ಕಳು ತಂದ ಕಾಣಿಕೆಗಳನ್ನು ಹರಾಜು ಮಾಡಲಾಯಿತು. ತದನಂತರ ಸಂತ ಜೋಸೆಫ್ ವಾಜ್ ಸಭಾಂಗಣದಲ್ಲಿ ಮಕ್ಕಳಿಗಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ದೇವಾಲಯದ ಧರ್ಮಗುರುಗಳು ವಂ। ರೋಶನ್ ಡಿಸೋಜರವರು ಮಿಷನರಿ ಮಕ್ಕಳ ಉದ್ದೇಶದ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕಾನ್ವೆಂಟಿನ ಧರ್ಮಭಗಿನಿ ವಂ। ಕ್ರೇಸನ್ಸ್, ಪಾಲನಾ ಮಂಡಳಿಯ ಉಪಾಧ್ಯಕ್ಷ ಆಲ್ವಿನ್ ಕ್ರಾಸ್ತಾ, ಕಾರ್ಯದರ್ಶಿ ಗ್ಲೋರಿಯಾ ಫೆರ್ನಾಂಡಿಸ್, 20 ಆಯೋಗಗಳ ಸಂಯೋಜಕಿ ರೆನಿಟಾ ಬಾರ್ನೆಸ್, ಸುವಾರ್ತೆ ಪ್ರಸಾರ ಆಯೋಗದ ಸಂಚಾಲಕರಾದ ಆಶಾ ಫೆರ್ನಾಂಡಿಸ್ ಮತ್ತು ಸದಸ್ಯರು ಹಾಜರಿದ್ದರು. ಫ್ಲೇವನ್ ಲೋಬೊ ಎಲ್ಲರನ್ನೂ ಸ್ವಾಗತಿಸಿ, ಫಿಯೋನ ವಾಜ್ ಕಾರ್ಯಕ್ರಮ ನಿರೂಪಿಸಿ, ರಿಮಾ ಡಿ ಅಲ್ಮೇಡ ಧನ್ಯವಾದ ತಿಳಿಸಿದರು.
![](https://jananudi.com/wp-content/uploads/2025/02/2-2.jpg)
![](https://jananudi.com/wp-content/uploads/2025/02/3-2.jpg)
![](https://jananudi.com/wp-content/uploads/2025/02/4-2.jpg)
![](https://jananudi.com/wp-content/uploads/2025/02/5-2.jpg)
![](https://jananudi.com/wp-content/uploads/2025/02/6-1-1.jpg)
![](https://jananudi.com/wp-content/uploads/2025/02/6-2.jpg)
![](https://jananudi.com/wp-content/uploads/2025/02/6-3.jpg)
![](https://jananudi.com/wp-content/uploads/2025/02/6-4.jpg)