ವಿಧಾನ ಪರಿಷತ್ ಚುನಾವಣೆ – ಕಾಂಗ್ರೆಸನಿಂದ ಬಿರುಸಿನ ಮತದಾನ.

JANANUDI.COM NETWORK

ಇಂದು ನಡೆದ ಉಡುಪಿ – ಮಂಗಳೂರು ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಮೂಲಕ ವಿಧಾನ ಪರಿಷತ್ ಚುನಾವಣೆ ಯಲ್ಲಿ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿ ಯಲ್ಲಿ ಅಭ್ಯರ್ಥಿ ಮಂಜುನಾಥ್ ಭಂಡಾರಿ ಪರ ಬಿರುಸಿನ ಮತದಾನ ನಡೆಯಿತು.
ಕುಂದಾಪುರ ಬ್ಲಾಕ್ ಕಾಂಗ್ರೆಸ್ ಆಲ್ಲಿ 23 ಪಂಚಾಯತಗಳು ಮತ್ತು ಪುರಸಭೆ ಹೊಂದಿದ್ದು ಗರಿಷ್ಟ ಕಾಂಗ್ರೇಸ್ ಮತದಾರರು ಇದ್ದಾರೆ. ಪ್ರತಿ ಪಂಚಾಯತ್ ಮತ್ತು ಪುರಸಭೆಗೆ ಬ್ಲಾಕ್ ಕಾಂಗ್ರೇಸವತಿಯಿಂದ ವೀಕ್ಷಕರನ್ನು ಮತ್ತು ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರನ್ನು ನಿಯೋಜಿಸಲಾಗಿತು. ಬೆಳಗ್ಗೆ 8.00 ಘಂಟೆಗೆ ಪ್ರಾರಂಭವಾದ ಚುನಾವಣೆ ಪ್ರಕ್ರಿಯೆಯಲ್ಲಿ ಕಾಂಗ್ರೇಸ್ ಪರ ಪೋಲಿಂಗ್ ಏಜೆಂಟ್ ಹಾಜರಿದ್ದು, ಶಿಸ್ತುಬದ್ಧ ,ವ್ಯವಸ್ಥಿತ ಮತದಾನವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ತಾ ತಿಳಿಸಿದ್ದಾರೆ.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ, ಕೆ. ಪಿ. ಸಿ. ಸಿ ಸಂಯೋಜಕಿ ಮಮತಗಟ್ಟಿ, ಮುಖಂಡರಾದ ಮಲ್ಯಾಡಿ ಶಿವರಾಮ ಶೆಟ್ಟಿ ,ವಕ್ತಾರ ವಿಕಾಸ್ ಹೆಗಡೆ ,ಯುವ ಕಾಂಗ್ರೇಸ್ ಅಧ್ಯಕ್ಷ ಇಶ್ಚಿತರ್ಥ್ ಶೆಟ್ಟಿ, ಯುವ ಕಾಂಗ್ರೇಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಭಿಜಿತ್ ಪೂಜಾರಿ ಪ್ರತೀ ಪಂಚಾಯತ್ ಗೆ ಈ ಹಿಂದೆ ಬೇಟಿ ಯನ್ನು ನೀಡಿ ಮತದಾನದ ವಿವರವನ್ನು ನೀಡಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಿ ಪ್ರಸಾದ್ ಶೆಟ್ಟಿ ಯವರು ಅಭ್ಯರ್ಥಿ ಮಂಜುನಾಥ್ ಭಂಡಾರಿ ಗೆಲ್ಲುವುದು ಖಚಿತ ಎಂದು ತಿಳಿಸಿದ್ದಾರೆ
.