

ಕುಂದಾಪುರ,ಜೂ.12: ಎಮ್.ಸಿ.ಸಿ.ಬ್ಯಾಂಕ್ ಲಿ. ಇವರಿಂದ ಕುಂದಾಪುರ ಸಂತ ಜೋಸೆಫ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಮತ್ತು ಪುಸ್ತಕಗಳ ವಿತರಣೆಯನ್ನು ಜೂ. 11 ರಂದು ವಿತರಣೆ ಮಾಡಲಾಯಿತು.
ಎಮ್.ಸಿ.ಸಿ.ಬ್ಯಾಅಂಕ್ ಲಿ. ಇದರ ಅಧ್ಯಕ್ಷರಾದ ಅನಿಲ್ ಲೋಬೊ ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಮತ್ತು ಪುಸ್ತಕಗಳನ್ನು ವಿತರಿಸಿ ಮಾತನಾಡಿದ ಅವರು ನಮ್ಮ ಸಂಸ್ಥೆ ಬೆಳೆಯಬೇಕಾದರೆ ಈ ಶಾಲ ಸಂಸ್ಥೆಗಳ ಪಾಲು ಇದೆ. ನೀವು ಇವತ್ತು ಸಂತೋಷದಿಂದ ಇದ್ದಿರಿ, ಆದರೆ ನೀವು ಕಲಿಕೆಯ ಸಮಯದಲ್ಲಿಯು ಸಂತೋಷವಾಗಿದ್ದು, ಕಲಿಕೆಯಲ್ಲಿ ಮುಂದೆ ಬರಬೇಕು, ನೀವು ಯಾವತ್ತು ಒತ್ತಡಕ್ಕೆ ಒಳಗಾಗಬಾರದು, ಹಾಗಾದ ಪಕ್ಷದಲ್ಲಿ ನೀವು ಹೆತ್ತವರು, ಗುರುಗಳು, ನಿಮ್ಮ ಪ್ರಿಯರವರಲ್ಲಿ ಹೇಳಿಕೊಂಡು ಅದನ್ನು ಪರಿಹರಿಸಿಕೊಂಡು ಶಾಂತಚಿತ್ತರಾಗಿ ಒದನ್ನು ಮುಂದುವರೆಸಿ ಸಾಧನೆ ಮಾಡಬೇಕು, ನೀವು ಇವತ್ತು ಶಾಲಾ ಕಲಿಕಾಪೋರಣ ವಸ್ತುಗಳನ್ನು ಪಡೆದುಕೊಂಡಿದ್ದಿರಿ, ಮುಂದಿನ ದಿವಸದಲ್ಲಿ ನೀವು ಇತರರಿಗೆ ಸಹಾಯ ಮಾಡುವಂತಹ ಉದ್ದೇಶ ನಿಮ್ಮದಾಗ ಬೇಕು, ನಮ್ಮ ಸಂಸ್ಥೆಗಾಗಿ ನೀವು ಪ್ರಾರ್ಥಿಸಬೇಕು, ಚಿಕ್ಕ ಮಕ್ಕಳ ಪ್ರಾಥನೆ ದೇವರು ಮೆಚ್ಚುತ್ತಾನೆ ” ಎಂದರು
ಶಾಲಾ ಜಂಟಿ ಕಾರ್ಯದರ್ಶಿಯವರಾದ ರೋಜರಿ ಮಾತಾ ಚರ್ಚಿನ ಧರ್ಮಗುರ್ ಅ।ವಂ।ಪೌಲ್ ರೇಗೊ ಮಾತನಾಡಿ “ಎಮ್.ಸಿ.ಸಿ.ಬ್ಯಾಂಕ್ ಲಿ. ಇವರು ಅನುದಾನ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಪುಸ್ತಕ ಬ್ಯಾಗ್ ನೀಡಿ ಸಹಾಯ ಮಾಡುತ್ತಾರೆ, ಅವರ ಉದಾರ ಮನಸ್ಸಿಗೆ ದೇವರು ಒಳ್ಳೆದು ಮಾಡಲಿ, ಅವರಿಗೆ ಇನ್ನೂ ಹೆಚ್ಚಿನ ಸಹಾಯ ಮಾಡಲು ದೇವರು ಶಕ್ತಿ ನೀಡಲಿ ಎಂದು ಆಶಿರ್ವಚನ ನೀಡಿದರು’
ಈ ಸಂದರ್ಭದಲ್ಲಿ ಶಾಲೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯನ್ನು ಬ್ಯಾಂಕಿನ ಪರವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಎಮ್.ಸಿ.ಸಿ.ಬ್ಯಾಂಕಿನ ನಿರ್ದೇಶಕರಾದ ಎಲ್ರೋಯ್ ಕಿರಣ್ ಕ್ರಾಸ್ಟೊ, ಡಾ.ಜೆರಾಲ್ಡ್ ಪಿಂಟೊ, ಕುಂದಾಪುರ ಎಮ್.ಸಿ.ಸಿ.ಬ್ಯಾಂಕ್ ಶಾಖೆಯ ಪ್ರಭಾರ ವ್ಯವಸ್ಥಾಪಿಕೆಯಾದ ಜೊನಿಟಾ ಲುವಿಸ್, ಉಪಸ್ಥಿತರಿದ್ದರು. ಹಿರಿಯ ಪ್ರಾರ್ಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಜ್ಯೋತಿ ಡಿಸಿಲ್ವಾ ಸ್ವಾಗತಿಸಿದರು. ಶಿಕ್ಷಕಿ ಪ್ರೀತಿ ನಿರೂಪಿಸಿ ಧನ್ಯವಾದ ನೀಡಿದರು.



















