

ಕುಂದಾಪುರ,ಜೂ.12: ಎಮ್.ಸಿ.ಸಿ.ಬ್ಯಾಂಕ್ ಲಿ. ಇವರಿಂದ ಗಂಗೊಳ್ಳಿ ಸ್ಟೆಲ್ಲಾ ಮಾರಿಸ್ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಕೊಡೆಗಳನ್ನು ಜೂ. 11 ರಂದು ವಿತರಣೆ ಮಾಡಲಾಯಿತು.
ಎಮ್.ಸಿ.ಸಿ.ಬ್ಯಾಅಂಕ್ ಲಿ. ಇದರ ಅಧ್ಯಕ್ಷರಾದ ಅನಿಲ್ ಲೋಬೊ ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಮತ್ತು ಪುಸ್ತಕಗಳನ್ನು ವಿತರಿಸಿ ಮಾತನಾಡಿದ ಅವರು ”ನಮ್ಮ ಸಂಸ್ಥೆ ಬೆಳೆಯಬೇಕಾದರೆ, ಈ ಕಾರ್ಮೆಲ್ ಸಂಸ್ಥೆಯ ಯೋಗದಾನ ಬಹಳಷ್ಟಿದೆ, ಕಾನ್ವೆಂಟ್ ಶಾಲೆಗಳೆಂದರೆ ಶಿಕ್ಷಣ ಕ್ಷೇತ್ರದಲ್ಲಿ ಪ್ರಸಿದ್ದಿ ಪಡೆದ ಶಾಲೆಗಳು ಅದರಲ್ಲೂ ಕಾರ್ಮೆಲ್ ಶಿಕ್ಷಣ ಸಂಸ್ಥೆಗಳೆಂದರೆಂ ಬಹಳ ಪ್ರಸಿದ್ದಿ ಪಡೆದಿವೆ, ನೀವು ಇಂದು ಸಹಾಯದ ರೂಪದಲ್ಲಿ ಪುಸ್ತಕ ಮತ್ತು ಕೋಡೆಗಳು ದೊರಕಿವೆ, ಇಂದು ನೀವು ಸಂತೋಷದಿಂದ ಇದ್ದಿರಿ, ಆದರೆ ನೀವು ಕಲಿಕೆಯ ಸಮಯದಲ್ಲಿಯು ಸಂತೋಷವಾಗಿದ್ದು, ಕಲಿಕೆಯಲ್ಲಿ ಸಂತೋಷದಿಂದ ವಿದ್ಯೆ ಕಲಿತು, ಸಾಧನೆ ಮಾಡಿ ಮುಂದಿನ ದಿವಸದಲ್ಲಿ ನೀವು ಇತರರಿಗೆ ಸಹಾಯ ಮಾಡುವಂತರಾಗ ಬೇಕು ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಬ್ಯಾಂಕಿನ ಪರವಾಗಿ ಸನ್ಮಾನಿಸಲಾಯಿತು.
ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಕ್ರೆಜನ್ಸ್ ಮಾತನಾಡಿ “ಎಮ್.ಸಿ.ಸಿ.ಬ್ಯಾಂಕ್ ಲಿ ನವರು ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ, ಇತರ ಸಂಸ್ಥೆಗಳಂತೆ ಸದಸ್ಯರಿಗೆ ಕಾಣಿಕೆಗಳನ್ನು ನೀಡಿ ಸಂತೋಷ ಪಡದೆ, ಅನುದಾನಿತ ಕನ್ನಡ ಶಾಲೆಗಳಿಗೆ ಕಲಿಕಾಪೋಕರಣಗಳನ್ನು ನೀಡಿ ಸಮಾಜ ಸೇವೆ ಮಾಡುತ್ತಾರೆಂದು ಹೇಳಿ ಬ್ಯಾಂಕಿನ ಅಧ್ಯಕ್ಷರನ್ನು ಶಾಲು ಹೊದೆಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಎಮ್.ಸಿ.ಸಿ.ಬ್ಯಾಂಕಿನ ನಿರ್ದೇಶಕರಾದ ಎಲ್ರೋಯ್ ಕಿರಣ್ ಕ್ರಾಸ್ಟೊ, ಡಾ.ಜೆರಾಲ್ಡ್ ಪಿಂಟೊ, ಕುಂದಾಪುರ ಎಮ್.ಸಿ.ಸಿ.ಬ್ಯಾಂಕ್ ಶಾಖೆಯ ಪ್ರಭಾರ ವ್ಯವಸ್ಥಾಪಿಕೆಯಾದ ಜೊನಿಟಾ ಲುವಿಸ್, ಉಪಸ್ಥಿತರಿದ್ದರು. ಶಿಕ್ಷಕಿ ಶಾಂತಿ ಕ್ರಾಸ್ತಾ ಸ್ವಾಗತಿಸಿದರು ವಿದ್ಯಾರ್ಥಿನಿ ಪ್ರತೀತಿ ಧನ್ಯವಾದ ನೀಡಿದಳು, ಶಿಕ್ಷಕ ಗಣೇಶ್ ಹೆಬ್ಬಾರ್ ನಿರೂಪಿಸಿದರು.


































