

ಕುಂದಾಪುರ,ಜೂ.12: ಎಮ್.ಸಿ.ಸಿ.ಬ್ಯಾಂಕ್ ಲಿ. ಇವರಿಂದ ಕುಂದಾಪುರ ಸಂತ ಜೋಸೆಫ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಮತ್ತು ಪುಸ್ತಕಗಳ ವಿತರಣೆಯನ್ನು ಜೂ. 11 ರಂದು ವಿತರಣೆ ಮಾಡಲಾಯಿತು.
ಎಮ್.ಸಿ.ಸಿ.ಬ್ಯಾಅಂಕ್ ಲಿ. ಇದರ ಅಧ್ಯಕ್ಷರಾದ ಅನಿಲ್ ಲೋಬೊ ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಮತ್ತು ಪುಸ್ತಕಗಳನ್ನು ವಿತರಿಸಿ ಮಾತನಾಡಿದ ಅವರು ”ನಮ್ಮ ಸಂಸ್ಥೆ ಬೆಳೆಯಬೇಕಾದರೆ, ಈ ಕಾರ್ಮೆಲ್ ಸಂಸ್ಥೆಯ ಯೋಗದಾನ ಬಹಳಷ್ಟಿದೆ, ಅದರ ಪ್ರತಿಫಲ ಸಂತ ಜೋಸೆಫ್ ಶಾಲೆಯ ಮಕ್ಕಳಾದ ನೀವು ಇವತ್ತು ಪಡೆಯುತ್ತಿದ್ದಿರಿ, ನೀವು ಇವತ್ತು ಸಂತೋಷದಿಂದ ಇದ್ದಿರಿ, ಆದರೆ ನೀವು ಕಲಿಕೆಯ ಸಮಯದಲ್ಲಿಯು ಸಂತೋಷವಾಗಿದ್ದು, ಕಲಿಕೆಯಲ್ಲಿ ಮುಂದೆ ಬರಬೇಕು, ನೀವು ಯಾವತ್ತು ಒತ್ತಡಕ್ಕೆ ಒಳಗಾಗಬಾರದು, ಹಾಗಾದ ಪಕ್ಷದಲ್ಲಿ ನೀವು ಹೆತ್ತವರು, ಗುರುಗಳು, ನಿಮ್ಮ ಪ್ರಿಯರವರಲ್ಲಿ ಹೇಳಿಕೊಂಡು ಅದನ್ನು ಪರಿಹರಿಸಿಕೊಂಡು ಶಾಂತಚಿತ್ತರಾಗಿ ಒದನ್ನು ಮುಂದುವರೆಸಿ ಸಾಧನೆ ಮಾಡಬೇಕು, ನೀವು ಇವತ್ತು ಶಾಲಾ ಕಲಿಕಾಪೋರಣ ವಸ್ತುಗಳನ್ನು ಪಡೆದುಕೊಂಡಿದ್ದಿರಿ, ಮುಂದಿನ ದಿವಸದಲ್ಲಿ ನೀವು ಇತರರಿಗೆ ಸಹಾಯ ಮಾಡುವಂತಹ ಉದ್ದೇಶ ನಿಮ್ಮದಾಗ ಬೇಕು ” ಎಂದು ಹೇಳಿದರು
ಈ ಸಂದರ್ಭದಲ್ಲಿ ಶಾಲೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಬ್ಯಾಂಕಿನ ಪರವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಎಮ್.ಸಿ.ಸಿ.ಬ್ಯಾಂಕಿನ ನಿರ್ದೇಶಕರಾದ ಎಲ್ರೋಯ್ ಕಿರಣ್ ಕ್ರಾಸ್ಟೊ, ಡಾ.ಜೆರಾಲ್ಡ್ ಪಿಂಟೊ, ಕುಂದಾಪುರ ಎಮ್.ಸಿ.ಸಿ.ಬ್ಯಾಂಕ್ ಶಾಖೆಯ ಪ್ರಭಾರ ವ್ಯವಸ್ಥಾಪಿಕೆಯಾದ ಜೊನಿಟಾ ಲುವಿಸ್, ಉಪಸ್ಥಿತರಿದ್ದರು. ಹಿರಿಯ ಪ್ರಾರ್ಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಮರಿಯಾ ಪ್ರೇಮಿಕಾ ಉಪಸ್ಥಿತರಿದ್ದರು
ಸಂತ ಜೋಸೆಫ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ವಂ|ಭಗಿನಿ ಐವಿ ಸ್ವಾಗತಿಸಿದರು ಶಿಕ್ಷಕ ಮೈಕಲ್ ಪುಟಾರ್ಡೊ ಧನ್ಯವಾದಗಳನ್ನು ಅರ್ಪಿಸಿದರು, ಶಿಕ್ಷಕ ಅಶೋಕ್ ದೆವಾಡಿಗ ನಿರೂಪಿಸಿದರು.



































