

ಕುಂದಾಪುರ,ಜೂ.12: ಎಮ್.ಸಿ.ಸಿ.ಬ್ಯಾಂಕ್ ಲಿ. ಸಂತ ಅಂತೋನಿ ಹಿ. ಪ್ರಾರ್ಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ಕೊಡೆಗಳ ವಿತರಣೆ ಜೂ. 11 ರಂದು ವಿತರಣೆ ಮಾಡಲಾಯಿತು.
ಎಮ್.ಸಿ.ಸಿ.ಬ್ಯಾಅಂಕ್ ಲಿ. ಇದರ ಅಧ್ಯಕ್ಷರಾದ ಅನಿಲ್ ಲೋಬೊ ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಮತ್ತು ಪುಸ್ತಕಗಳನ್ನು ವಿತರಿಸಿ ಮಾತನಾಡಿದ ಅವರು ”ನಮ್ಮ ಸಂಸ್ಥೆ ಬೆಳೆಯಬೇಕಾದರೆ, ಕಥೊಲಿಕ್ ಶಿಕ್ಷಣ ಸಂಸ್ಥೆಗಳ ಯೋಗದಾನ ಬಹಳಷ್ಟಿದೆ, ನೀವು ಇವತ್ತು ಬ್ಯಾಗ್ ಮತ್ತು ಕೋಡೆಗಳು ಪಡೆದಿದ್ದರಿಂದ ಇಂದು ನೀವು ಸಂತೋಷದಿಂದ ಇದ್ದಿರಿ, ಆದರೆ ನೀವು ಕಲಿಕೆಯ ಸಮಯದಲ್ಲಿಯು ಸಂತೋಷವಾಗಿದ್ದು, ಕಲಿಕೆಯಲ್ಲಿ ಸಂತೋಷದಿಂದ ವಿದ್ಯೆ ಕಲಿತು, ಸಾಧನೆ ಮಾಡಿ ಮುಂದಿನ ದಿವಸದಲ್ಲಿ ನೀವು ಇತರರಿಗೆ ಸಹಾಯ ಮಾಡುವಂತಹ ವ್ಯಕ್ತಿಗಳಾಗಬೇಕು, ನೀವು ಚಿಕ್ಕ ಮಕ್ಕಳು ಮಾನಸಿಕ ಒತ್ತಡಕ್ಕೆ ಒಳಗಾಗಬಾರದು, ನಿಮ್ಮ ಸಮಸ್ಯಗಳನ್ನು ಹೆತ್ತವರಲ್ಲಿ, ಶಿಕ್ಷಕರಲ್ಲಿ ಹೇಳಿಕೊಂಡು ಒತ್ತಡ ರಹಿತರಾಗಿ ಕಲಿತು ಸಾಧನೆ ಮಾಡಬೇಕು ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಬ್ಯಾಂಕಿನ ಪರವಾಗಿ ಸನ್ಮಾನಿಸಲಾಯಿತು.
ಶಾಲಾ ಸಂಚಾಲಕ ಪಡಿಕೋಣೆ ಚರ್ಚಿನ ಧರ್ಮಗುರು ವಂ। ಫ್ರಾನ್ಸಿಸ್ ಕರ್ನೆಲೀಯೊ ಮಾತನಾಡಿ “ಎಮ್.ಸಿ.ಸಿ.ಬ್ಯಾಂಕ್ ಲಿ ನವರು, ನಮ್ಮ ಅನುದಾನಿತ ಕನ್ನಡ ಶಾಲೆಗಳು ಬಹಳ ಕಶ್ಟ ಅನುಭವಿಸುತ್ತಾ ಇವೆ, ಬಹಳಷ್ಟು ಜನರು ಆಕಾರ್ಷಣೆಗೆ ಒಳಗಾಗಿ ಇತರ ಶಾಲೆಗಳಿಗೆ ಹೋಗುತ್ತಾರೆ, ಇನ್ನೂ ಇವತ್ತಿನ ನೀತಿ ನಿಯಮಗಳು ನಮ್ಮ ಶಾಲೆಗಳನ್ನು ನೆಡೆಸಿಕೊಂಡು ಹೋಗಲು ಕಶ್ಟವಾಗುತ್ತೀದೆ, ಹೀಗಿರುವಾಗ ಎಮ್.ಸಿ.ಸಿ.ಬ್ಯಾಂಕ್ ಲಿ. ಕಲಿಕಾಪೋಕರಣಗಳನ್ನು ನೀಡಿ ಸಮಾಜ ಸೇವೆ ಮಾಡುತ್ತಾರೆ, ಅವರಂತಹ ದಾನಿ, ಹಾಗೂ ಹಳೆ ವಿದ್ಯಾರ್ಥಿಗಳ ಸಹಾಯದಿಂದ ನಮ್ಮ ಶಾಲೆಗಳು ಜೀವಂತ ಇವೆ’ ಎಂದು ತಿಳಿಸುತ್ತಾ ಬ್ಯಾಂಕಿನ ಅಧ್ಯಕ್ಷರನ್ನು ಶಾಲು ಹೊದೆಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಎಮ್.ಸಿ.ಸಿ.ಬ್ಯಾಂಕಿನ ನಿರ್ದೇಶಕರಾದ ಎಲ್ರೋಯ್ ಕಿರಣ್ ಕ್ರಾಸ್ಟೊ, ಡಾ.ಜೆರಾಲ್ಡ್ ಪಿಂಟೊ, ಕುಂದಾಪುರ ಎಮ್.ಸಿ.ಸಿ.ಬ್ಯಾಂಕ್ ಶಾಖೆಯ ಬ್ಯಾಂಕಿನ ಪ್ರಭಾರ ವ್ಯವಸ್ಥಾಪಿಕೆಯಾದ ಜೊನಿಟಾ ಲುವಿಸ್, ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯಿನಿ ಶಾಂತಿ ಪಾಯ್ಸ್ ಸ್ವಾಗತಿಸಿದರು ಶಿಕ್ಷಕಿ ನಿರ್ಮಲ ಫೆರ್ನಾಂಡಿಸ್ ಧನ್ಯವಾದ ನೀಡಿದರು, ಶಿಕ್ಷಕಿ ಕಾತ್ರಿನ್ ಡಾಯಸ್ ನಿರೂಪಿಸಿದರು.





























