ಕೊರೊನಾದಿಂದ ಕರ್ನಾಟದಲ್ಲಿ ಮಾರಣ ಹೋಮ ; ಇಂದು 592 ಬಲಿ

JANANUDI.COM NETWORK

ಬೆಂಗಳೂರು,ಮೇ.೭: ಕರ್ನಾಟಕದ ಎಲ್ಲೆಡೆ ಕೊರೊನಾ ಸೋಂಕಿತರು ಸಾಯುತ್ತಲೆ ಇದ್ದಾರೆ,ಮೊನ್ನೆ 346,ನಿನ್ನೆ 328  ಜನರು ಬಲಿಯಾಗಿದ್ದರು.  ಆದರೆ ಇಂದು ಈ ವೇಳೆಗೆ ಬರೊಬ್ಬರಿ 592 ಜನ ಬಲಿಯಾಗಿದ್ದಾರೆ ರಾತ್ರಿಯೊಳಗೆ ಈ ಸಂಖ್ಯೆ ಹೆಚ್ಚಾಗುವುದಂತು ಖಚಿತ. ಹಾಗೇ 49781 ಜನ ಸೋಂಕಿತರಾಗಿದ್ದಾರೆ

ಈ ಮಧ್ಯೆ ಕುಂದಾಪುರದಲ್ಲಿಯೂ ಕೊರೊನಾದಿಂದ ಒಬ್ಬರು ಬಲಿಯಾಗಿದ್ದರೆಂದು ತಿಳಿದು ಬಂದಿದೆ. ಕೊರೊನಾ ಅಷ್ಟೊಂದು ಮಾರಕ ರೋಗವಲ್ಲಾ, ಈ ಸಾಂಕ್ರಮಿಕ ರೋಗ ಡೇತ್ ರೇಟ್ ವಿಶ್ವ ಆರೋಗ್ಯದ ಪ್ರಕಾರ ಈಗಲೂ ಕಡಿಮೆ ಇದೆ. ಕೊರೊನಾ ಸೋಂಕಿತರಾದವರು  ಬಚಾವು ಆಗಬಹುದೆಂದು ಒಂದು ಕಡೆ ಹೇಳುತಿದ್ದರೂ, ಇಷ್ಟೊಂದು ಪ್ರಮಾಣದಲ್ಲಿ ಸಾಯುವುದು, ಚಿಂತಿಸ ಬೇಕಿದೆ.

     ಆಕ್ಷಿಜನ್ ಕೊರತೆ, ಬೆಡ್ ದೊರಕದೆ ಇರುವುದು ಕೆಲವು ಕಾರಣವಾದರೆ, ಇನ್ನೊಂದು ಕಾರಣ ಸರಿಯಾಗಿ ವೈದ್ಯಕೀಯ ಚಿಕಿತ್ಸೆ, ಸೌಲಭ್ಯ ಸಿಕ್ಕದೇ ಇರುವುದರಿಂದಲೇ ಈ ದುರಂತಗಳು ಸಂಭವಿಸುತ್ತವೆ ಅಂತಲೇ ಹೇಳ ಬೇಕಾಗುತ್ತದೆ.