

ಮಂಗಳೂರು; ಕದ್ರಿ ಯೋಗೇಶ್ವರ ಮಠ, ಚಿನ್ಮಯ ಹೈ ಸ್ಕೂಲ್, ಮಂಗಳೂರು, ಕರಾವಳಿ ಮಾಣಿಕ್ಯ ಸೇವಾಸಂಸ್ಥೆ(ರಿ.) ಮಂಗಳೂರು, ಮತ್ತು ನೇಜಿಗುರಿ ಗುಂಪು ಜಂಟಿ ಆಶ್ರಯದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಹಾಗೂ ರಾಕೇಶ್- ದಿವ್ಯ ಅವರ ದ್ವಿತೀಯ ಪುತ್ರಿ ಧ್ರುಹಿಯ ಹುಟ್ಟಿದಬ್ಬದ ಪ್ರಯುಕ್ತ ವನಮಹೋತ್ಸವ ಕಾರ್ಯಕ್ರಮ – 2025 ಜೂನ್ 14 ಶನಿವಾರ ಬೆಳಿಗ್ಗೆ 9.00 ಗಂಟೆಗೆ ಸರಿಯಾಗಿ
ಕದ್ರಿ ಜೋಗಿ ಮಠ, ಕದ್ರಿ ಪಾರ್ಕಿನ ಹತ್ತಿರ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಶ್ರೀ ಯೋಗೀಶ್ವರ (ಜೋಗಿ) ಮಠ, ಕದ್ರಿ ಮಂಗಳೂರು ಇಲ್ಲಿಯ ಪೀಠಾಧಿಪತಿ ಶ್ರೀ ಶ್ರೀ 1008 ರಾಜಯೋಗಿ ನಿರ್ಮಲ್ನಾಥ್ ಜೀ ಮಹಾರಾಜ್ ಇವರ ಆಶೀರ್ವಾದದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಹಾಗೆ ಕಾರ್ಯಕ್ರಮಕ್ಕೆ ಅವರು ಶುಭ ಹಾರೈಸಿದರು. ಕರಾವಳಿ ಮಾಣಿಕ್ಯ ಸೇವಾ ಸಂಸ್ಥೆಯ ಅಧ್ಯಕ್ಷರು ಶ್ರೀ ಸತೀಶ್ ಕುಮಾರ್ ಬಜಾಲ್ ಅವರು ಗಿಡ ನೆಟ್ಟು ಪರಿಸರ ಸಂರಕ್ಷಣೆ ಬಗ್ಗೆ ತಿಳಿಸಿದರು.
108ರಷ್ಟು ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ಸಾರಿದರು.
ಈ ಕಾರ್ಯಕ್ರಮದಲ್ಲಿ ಜೋಗಿ ಮಠದ ಕೇದಾರನಾಥ್ ಯೋಗೀಜಿ, ಕರಾವಳಿ ಮಾಣಿಕ್ಯ ಸೇವಾ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಕಮಲಾಕ್ಷ ಶೆಟ್ಟಿ ಹಾಗೂ ಸಂಸ್ಥೆಯ ಪದಾಧಿಕಾರಿಗಳು, ಚಿನ್ಮಯ ಹೈ ಸ್ಕೂಲ್, ಮಂಗಳೂರು ಉಪಾಧ್ಯಾಯರು ಹಾಗೂ ಮಕ್ಕಳು, ನೇಜಿಗುರಿ ಗುಂಪು ಅಧ್ಯಕ್ಷರಾದ ಶ್ರೀ ಅರುಣ್ ಡಿಸೋಜ ಹಾಗೂ ಸದಸ್ಯರು ಭಾಗವಹಿಸಿದ್ದರು.
ಕರಾವಳಿ ಮಾಣಿಕ್ಯ ಸೇವಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾದ ನಟರಾಜ್ ಪಚ್ಚನಾಡಿ ಕಾರ್ಯಕ್ರಮ ನಿರೂಪಿಸಿದರು.
ನೇಜಿಗುರಿ ಗುಂಪಿನ ರಾಕೇಶ್ ನೇಜಿಗುರಿ ಎಲ್ಲರಿಗೂ ಧನ್ಯವಾದ ತಿಳಿಸಿದರು.












