ಬೀಜಾಡಿ ಮಿತ್ರ ಸಂಗಮದ ಅಧ್ಯಕ್ಷರಾಗಿ ಮಹೇಶ್ ಮೊಗವೀರ ಆಯ್ಕೆ


ಕುಂದಾಪುರ:ಜಿಲ್ಲಾ ಅತ್ಯುತ್ತಮ ಯುವಕ ಮಂಡಲ ಪ್ರಶಸ್ತಿ ಪುರಸ್ಕೃತ, ಇಪ್ಪತ್ತೇಳನೇ ವರ್ಷದಲ್ಲಿ ಮುನ್ನಡೆಯುತ್ತಿರು ಬೀಜಾಡಿ-ಗೋಪಾಡಿ ಮಿತ್ರ ಸಂಗಮದ ವಾರ್ಷಿಕ ಮಹಾಸಭೆ ಬೀಜಾಡಿ ಮಿತ್ರಸೌಧದಲ್ಲಿ ಭಾನುವಾರ ಜರಗಿತು. ಸಂಸ್ಥೆಯ ನೂತನ ಅಧ್ಯಕ್ಷರಾಗಿ ಗೋಪಾಡಿ ಗಣೇಶ್ ಕಾರ್ ಕುಶನ್ ಮಾಲಿಕ ಮಹೇಶ್ ಮೊಗವೀರ ಅವಿರೋಧವಾಗಿ ಆಯ್ಕೆಗೊಂಡರು.ಗೌರವಾಧ್ಯಕ್ಷ ಬಿ.ವಾದಿರಾಜ್ ಹೆಬ್ಬಾರ್,ಉಪಾಧ್ಯಕ್ಷ ಸದಾಶಿವ ಪೈಂಟರ್,ಪ್ರಧಾನ ಕಾರ್ಯದರ್ಶಿ ಗಿರೀಶ್ ಕೆ.ಎಸ್, ಜೊತೆ ಕಾರ್ಯದರ್ಶಿ ಅರುಣ್ ದೇವಾಡಿಗ, ಕೋಶಾಧಿಕಾರಿ ಗಿರೀಶ್ ಆಚಾರ್ಯ, ಸಂಚಾಲಕರಾಗಿ ಚಂದ್ರ ಬಿ.ಎನ್.,ರಾಜೇಶ್ ಆಚಾರ್ಯ ಬೀಜಾಡಿ ಆಯ್ಕೆಗೊಂಡರು. ನಿರ್ದೇಶಕರಾಗಿ ಚಂದ್ರಶೇಖರ ಬೀಜಾಡಿ,ಶಂಕರನಾರಾಯಣ ಬಾಯರಿ,ಅನುಪ್ ಕುಮಾರ್ ಬಿ.ಆರ್., ದೀಪಾನಂದ ಉಪಾಧ್ಯ, ವಿಶ್ವನಾಥ ಹೆಗ್ಡೆ,ನಾಗರಾಜ ಬೀಜಾಡಿ,ಪ್ರದೀಪ್ ದೇವಾಡಿಗ,ರಾಜೇಶ್ ಆಚಾರ್ಯ ಗೋಪಾಡಿ, ಸುಭಾಷ್ ಪುತ್ರನ್,ಶ್ರೀಕಾಂತ್ ಭಟ್, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನಾರಾಯಣ ಭಂಡಾರಿ, ನಾಗರಾಜ ಬಿ.ಜಿ., ಗಜೇಂದ್ರ, ಐಶ್ವರ್ಯ ಬೀಜಾಡಿ, ಶ್ರೀನಿಧಿ ಭಟ್,ವಿವೇಕ್ ಹೆಬ್ಬಾರ್, ಪಾಂಡುರಂಗ,ಚಂದ್ರಶೇಖರ್ ಗೋಪಾಡಿ,ಮಂಜುನಾಥ್,ರಾಮ ನಾಯಕ್ ಆಯ್ಕೆಗೊಂಡರು.ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೀಜಾಡಿ ಮೂಡು ಇಲ್ಲಿನ ನಿವೃತ್ತ ಶಿಕ್ಷಕ ಮಾಲಾಡಿ ಗುರುರಾಜ ಭಟ್ ಇವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.