ಮಹಾಲಯ ಅಮಾವಾಸ್ಯೆ – ಪಿತೃ ತರ್ಪಣ ಕಾರ್ಯಕ್ರಮ

ಕುಂದಾಪುರ:  ಮಹಾಲಯ ಅಥವಾ ಸರ್ವಪಿತೃ ಅಮಾವಾಸ್ಯೆಯ ಪರ್ವ ದಿನವಾದ ಬುಧವಾರ ಮಧ್ಯಾನ್ಹ ಕುಂಭಾಸಿಯ ಶ್ರೀ ಸೋದೆ ಮಠದಲ್ಲಿ ಸಾಮೂಹಿಕ ತಿಲ ತರ್ಪಣ ಕಾರ್ಯಕ್ರಮ ನಡೆಯಿತು. ವೇದಮೂರ್ತಿ ತ್ರಿವಿಕ್ರಮ ಗೋಟರ ಪೌರೋಹಿತ್ಯದಲ್ಲಿ ಶ್ರದ್ಧಾಳು ಪುರುಷರು ತಮ್ಮ ಕುಟುಂಬದ ಅಗಲಿದ ಹಿರಿ – ಕಿರಿಯರು ಹಾಗೂ ಅಗಲಿದ ಬಂಧು ಮಿತ್ರ, ಗುರುಗಳಿಗೆ ತಿಲ ತರ್ಪಣ ನೀಡಿ ಪಿತೃವಂದನೆ ಸಲ್ಲಿಸಿದರು.  ಶ್ರೀ ಮಠದ ಉಸ್ತುವಾರಿ ಲಕ್ಷ್ಮೀ ನಾರಾಯಣ ಪುರಾಣಿಕರು ನೇತೃತ್ವ ವಹಿಸಿದ್ದರು.