ನೆರೆ ಹೊರೆಯವರನ್ನು ಪ್ರೀತಿಸಿ, ಮನುಷ್ಯನಿಗೆ ಮನುಷ್ಯತ್ವ ಮುಖ್ಯ, ಮನುಷ್ಯತ್ವದಿಂದ ಬಾಳೋಣ – ಫಾ. ವಿಜಯ್

JANANUDI.COM NETWOR


ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕ್ರಿಸ್ಮಸ್ ಕಾರ್ಯಕ್ರಮ


ಕುಂದಾಪುರ, ಡಿ.23: “ನಾವು ದೇವರನ್ನು ಪೀತಿಸಬೇಕು ಮತ್ತು ನಮ್ಮ ನೆರೆಹೊರೆಯವರನ್ನು ಪ್ರೀತಿಸಬೇಕು. ನಾವು ಯೇಸು ಕ್ರಿಸ್ತರು ತೋರಿದ ಮಾರ್ಗದಲ್ಲಿ ನಡೆದು ಜಾತಿ, ಮತ, ಧರ್ಮ ಎಂಬ ಬೇಧಭಾವವನ್ನು ತೋರದೆ ಒಂದಾಗಿ ಬಾಳಿ ಉತ್ತಮ ಮನುಷ್ಯತ್ವದ ಹಾದಿಯಲ್ಲಿ ಮುನ್ನೆಡೆಯಬೇಕು” ಎಂದು ಕುಂದಾಪುರ ಹೋಲಿ ರೋಸರಿ ಮಾತಾ ಇಗರ್ಜಿಯ ಸಹಾಯಕ ಧರ್ಮಗುರು ವಂ|ವಿಜಯ್ ಜೊಯ್ಸನ್ ಡಿಸೋಜಾರವರು ಹೇಳಿದರು.
ಅವರು ಸ್ಥಳಿಯ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಕ್ರಿಸ್ಮಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಸಂದೇಶ ನೀಡಿ, ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ನೀಡಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾದ್ಯಾಯಿನಿ ಸಿಸ್ಟರ್ ತೆರೆಜ್ ಶಾಂತಿ ಎಸಿ ವಹಿಸಿದ್ದು, ವಿದ್ಯಾರ್ಥಿ ನಾಯಕಿ ರಿಷಿಕಾ ಮೊಂತೆರೋ ಸ್ವಾಗತಿಸಿದರು. ವಿದ್ಯಾರ್ಥಿ ಉಪನಾಯಕಿ ದಶಮಿ ಧನ್ಯವಾದ ಸಮರ್ಪಿಸಿದರು. ವಿದ್ಯಾರ್ಥಿನಿ ಇಶಾನಾರವರು ಕಾರ್ಯಕ್ರಮವನ್ನು ನಿರೂಪಿಸಿದರು.