ಲಯನ್ಸ್ ಕ್ಲಬ್ ಘಟಕಗಳಾದ ಬ್ರಹ್ಮಗಿರಿ, ಉಡುಪಿ ಮಿಡ್ ಟೌನ್, ರೆಡ್ ಕ್ರಾಸ್ ಕುಂದಾಪುರ ತಾ. ಘಟಕ, ರೆಡ್ ಕ್ರಾಸ್ ಉಡುಪಿ ಜಿಲ್ಲಾ ಘಟಕ, ಉಡುಪಿ ಕೊಚಿನ್‌‌ ಶಿಪ್ ಯಾರ್ಡ್ ಸಂಯೋಗದಿಂದ ರಕ್ತದಾನ ಶಿಬಿರ

ಲಯನ್ಸ್ ಕ್ಲಬ್ ಬ್ರಹ್ಮಗಿರಿ, ಲಯನ್ಸ್ ಕ್ಲಬ್ ಉಡುಪಿ ಮಿಡ್ ಟೌನ್, ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ತಾಲೂಕು ಘಟಕ, ರೆಡ್ ಕ್ರಾಸ್ ಉಡುಪಿ ಜಿಲ್ಲಾ ಘಟಕ ಮತ್ತು ಉಡುಪಿ ಕೊಚಿನ್‌‌ ಶಿಪ್ ಯಾರ್ಡ್ – ಮಲ್ಪೆ ಇವರ ಸಂಯೋಗದಿಂದ ನಡೆದ ರಕ್ತ ದಾನ ಶಿಭಿರದ ಉದ್ಘಾಟನೆ ಯನ್ನು ಉಡುಪಿ ಕೊಚಿನ್ ಶಿಪ್ ಯಾರ್ಡ್ CEO ಹರೀಶ್ ಕುಮಾರ್ ಎ. ನೆರವೇರಿಸಿದರು. ಮುಖ್ಯ ಅತಿಥಿ ಗಳಾದ ರೆಡ್ ಕ್ರಾಸ್ ಕುಂದಾಪುರ ಸಭಾಪತಿ ಗಳಾದ ಶ್ರೀ ಎಸ್ ಜಯಕರ ಶೆಟ್ಟಿ ಇವರು ಪ್ರಾಸ್ತಾವಿಕ ಮಾತನಾಡಿದರು. ಲಯನ್ಸ್ ಬ್ರಹ್ಮಗಿರಿ ಅದ್ಯಕ್ಷ ರಾದ ಅಶೋಕ್ ನಾಯಕ್, ಲಯನ್ಸ್ ಉಡುಪಿ ಮಿಡ್ ಟೌನ್ ಅದ್ಯಕ್ಷ ರಾದ ವೀಣಾ ಜೆ. ಶೆಟ್ಟಿ, ಜಿಲ್ಲಾ ರೆಡ್ ಕ್ರಾಸ್ ಕಾರ್ಯದರ್ಶಿ ರತ್ನಾಕರ ಶೆಟ್ಟಿ, ಶಿಪ್ ಯಾರ್ಡ್ DGM – ಅಂಬಲವನನ್, ಕುಂದಾಪುರ ಘಟಕದ ಖಜಾಂಚಿ ಶಿವರಾಮ ಶೆಟ್ಟಿ ಮತ್ತು ಜಿಲ್ಲಾ ಶಾಖೆಯ ಬಾಲಕ್ರಷ್ಣ ಶೆಟ್ಟಿ ಉಪಸ್ಥಿತರಿದ್ದರು