ರೋಟರಿ ಶಿರ್ವದ ವತಿಯಿಂದ ವಕೀಲರ ದಿನಾಚರಣೆ

ಶಿರ್ವ: ”ತಮ್ಮಲ್ಲಿ ನ್ಯಾಯ ಕೇಳಿ ಬಂದವರಿಗೆ ನ್ಯಾಯ ಒದಗಿಸುವುದು ನ್ಯಾಯವಾದಿಗಳ ಕರ್ತವ್ಯವಾಗಿರುತ್ತದೆ ಎಂದು ಶಿರ್ವ ರೋಟರಿ ಅಧ್ಯಕ್ಷ ಡಾ. ವಿಟ್ಠಲ್ ನಾಯಕ್ ಅಭಿಪ್ರಾಯ ಪಟ್ಟರು. ಅವರು ರೋಟರಿ ಶಿರ್ವದ ವತಿಯಿಂದ ಹಮ್ಮಿಕೊಂಡ ವಕೀಲರ ದಿನಾಚರಣೆ ಯಲ್ಲಿ ಮಾತನಾಡಿದರು.
ಹಿರಿಯ ವಕೀಲರಾದ ಜಯಕೃಷ್ಣ ಆಳ್ವ ಹಾಗೂ ಮೆಲ್ವಿನ್ ಡಿಸೋಜಾ ರವರನ್ನು ಸನ್ಮಾನಿಸಲಾಯಿತು. ಜಯಕೃಷ್ಣ ಆಳ್ವರವರು ಕ್ರಿಮಿನಲ್ ಹಾಗೂ ಮೆಲ್ವಿನ್ ಡಿಸೋಜಾ ರವರು, ಸಿವಿಲ್ ಕಾನೂನು ಮಾಹಿತಿ ನೀಡಿದರು. ಕ್ಲಬ್ ಸೇವಾ ಸಭಾಪತಿ ಮೈಕಲ್ ಮಥಾಯಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಾ. ವಿಟ್ಠಲ್ ನಾಯಕ್ ಸ್ವಾಗತಿಸಿದರು. ಕಾರ್ಯದರ್ಶಿ ರೊ. ದಿನೇಶ್ ಕುಲಾಲ್ ವಂದಿಸಿದರು.