ತೆಲಾಂಗಣ:ವಕೀಲ ದಂಪತಿಯನ್ನು ಮಾರಕ ಆಯುಧಗಳಿಂದ ನಡುರಸ್ತೆಯಲ್ಲೆ ಕೊಚ್ಚಿ ಕೊಚ್ಚಿ ಹತ್ಯೆ

JANANUDI.COM NETWORK

ತೆಲಂಗಾಣ: ವೈಯಕ್ತಿಯ ದ್ವೇಷದ ಹಿನ್ನೆಲೆಯಲ್ಲಿ ನಡುರಸ್ತೆಯಲ್ಲಿಯೇ ಕಾರನ್ನು ಅಡ್ಡ ಕಟ್ಟಿ ವಕೀಲ ದಂಪತಿಯನ್ನು ಮಾರಕ ಆಯುಧಗಳಿಂದ ಕೊಚ್ಚಿ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ಮಂಘಾನಿ ಹಾಗೂ ಪೆದ್ದಪಲ್ಲಿ ಪಟ್ಟಣಗಳ ನಡುವಿನ ವಾಹನ ಮತ್ತು ಜನಜಂಗುಳಿ ಇರುವ ರಸ್ತೆಯಲ್ಲಿ ಜರುಗಿದೆ.
ಗಟ್ಟು ವಾಮನ್ ರಾವ್ ಹಾಗೂ ಅವರ ಪತ್ನಿ ಪಿ.ವಿ.ನಾಗಮಣಿ ಕೊಲೆಯಾದವರು. ವಾಮನ್ ರಾವ್ ಅವರನ್ನು ಹಂತಕರು ಕಾರಿನಿಂದ ಎಳೆದುನಡುರಸ್ತೆಯಲ್ಲೆ ಕೊಚ್ಚಿ ಆಮೇಲೆ ಹಂತಕರು ತಮ್ಮ ಕಾರನ್ನು ಅವರ ಮೇಲೆ ಹರಿದಿ ಪರಾರಿಯಾಗಿದ್ದಾರೆ. ಈ ದಂಪತಿ ತೆಲಂಗಾಣದ ಹೈಕೋರ್ಟ್‌ ವಕೀಲರಾಗಿದ್ದರು.ಗಂಭೀರ ಗಾಯಗೊಂಡಿದ್ದ ವಕೀಲ ದಂಪತಿಯನ್ನು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ.
ವಾಮನ್ ರಾವ್ ಅವರ ತಂದೆ ಕೃಷ್ಣ ರಾವ್ ಅವರು ಕುಂಟಿ ಶ್ರೀನಿವಾಸ್ ಹಾಗೂ ಇತರರ ವಿರುದ್ದ ದೂರು ದಾಖಲಿಸಿದ ಅರ್ಧಗಂಟೆಯಲ್ಲೆ ಈ ಕೃತ್ಯ ಜರುಗಿದೆ ಎಂದು ತಿಳಿದುಬಂದಿದೆ. ವಾಮನ್‌ ರಾವ್‌ ಕೂಡ ಸಾಯುವ ಮುನ್ನ ಕುಂಟಿ ಶ್ರೀನಿವಾಸ್‌ ಹೆಸರು ಹೇಳಿದ್ದಾರೆ. ಅದನ್ನು ದಾರಿಹೋಕರು ತಮ್ಮ ಮೊಬ್ಯಲ್ ನಲ್ಲಿ ಚಿತ್ರೀಕರಿಸಿದ್ದಾರೆ. ವಿಡೀಯೊ ನೋಡಲು ಭೀಕರಾವಾಗಿದ್ದು,ಸ್ಥಳಿಯರು ಯಾರೊಬ್ಬರೂ ರಕ್ಷಣೆಗೆ ಮುಂದಾಗಲಿಲ್ಲವೆಂಬುದು ತಿಳಿದು ಬರುತ್ತದೆ. ಪತ್ನಿಯ ದೇಹ ಕಾರಳೊಗಿದ್ದುದು ಕಾಣಲು ಸಿಗುತ್ತದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಆರೋಪಿಗಳನ್ನು ಬಂಧಿಸಲಾಗಿದೆ. ಇವರೆಲ್ಲವೂ ಕುಂಟಿ ಶ್ರೀನಿವಾಸ್‌ ಎಂಬ್ಬವರ ಸಹಚರರಾಗಿದ್ದಾರೆಂದು ತಿಳಿದುಬಂದಿದೆ.
ಈ ಕೃತ್ಯದಲ್ಲಿ ಭಾಗಿಯಾಗಿರುವವರ ಶೋಧಕಾರ್ಯಕ್ಕೆ ಆರು ತಂಡಗಳನ್ನು ರಚಿಸಿರುವುದಾಗಿ ಪೊಲೀಸ್ ಕಮಿಷನರ್ ವಿ.ಸತ್ಯನಾರಾಯಣ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ
.