ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಲಕ್ಷ ಪ್ರದಕ್ಷಿಣೆ ಪ್ರಾರಂಭಗೊಳ್ಳಲಿದೆ


ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಅಧಿಕ ಮಾಸ ಪ್ರಯುಕ್ತ ಶ್ರೀ ದೇವರ ಪ್ರಿತ್ಯರ್ಥ “ಲಕ್ಷ ಪ್ರದಕ್ಷಿಣೆ” ಜುಲೈ 19ರಿಂದ ಪ್ರಾರಂಭಗೊಳ್ಳಲಿದೆ. ಸಮಾಜ ಬಾಂಧವರು ಈ ಧಾರ್ಮಿಕ ಪ್ರದಕ್ಷಿಣೆಯಲ್ಲಿ ಭಾಗವಹಿಸಿ, ಶ್ರೀದೇವರ ಕೃಪಾ ಕಟಾಕ್ಷಕ್ಕೆ ಪಾತ್ರರಾಗಬೇಕೆಂದು ಆಡಳಿತ ಮೊಕ್ತೇಸರರಾದ ಕೆ. ರಾಧಾಕೃಷ್ಣ ಶೆಣೈ ತಿಳಿಸಿದ್ದಾರೆ. ಪ್ರದಕ್ಷಿಣೆ ಅವಧಿ ಬೆಳಿಗ್ಗೆ 6ರಿಂದ ಮಧ್ಯಾಹ್ನ 12 ಗಂಟೆ, ಸಂಜೆ 6 ರಿಂದ ರಾತ್ರಿ 8ರ ತನಕ ಎಂದು ತಿಳಿಸಲಾಗಿದೆ.