ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ‘ ಕನ್ನಡಕ್ಕಾಗಿ ನಾವು ‘ ಅಭಿಯಾನದ ಅಂಗವಾಗಿ ಕನ್ನಡ ಗೀತಗಾಯನ

JANANUDI.COM NETWORK

ಸಮೃದ್ಧ ಕನ್ನಡಭಾಷೆಯ ಹಿರಿಮೆಗೆ ಕನ್ನಡಿಗರ ಬದ್ದತೆಯನ್ನು ಸಾರಲು  ದೇಶ ವಿದೇಶದಾದ್ಯಂತ ಏಕಕಾಲದಲ್ಲಿ ‌ಆಯೋಜಿಸಲಾದ ‘ಕನ್ನಡಕ್ಕಾಗಿ ನಾವು’ ಅಭಿಯಾನದ ಅಂಗವಾಗಿ ಆರ್. ಎನ್ ಎಸ್. ಪದವಿ ಪೂರ್ವ ಕಾಲೇಜಿನ‌ ಸರ್ವ ವಿದ್ಯಾರ್ಥಿಗಳಿಂದ ರಾಜ್ಯಸರ್ಕಾರದಿಂದ ಸೂಚಿತವಾದ ಕನ್ನಡಗೀತೆಗಳ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಕನ್ನಡ ನುಡಿ, ಸಂಸ್ಕ್ರತಿಯನ್ನು ಉಳಿಸಿ ಬೆಳೆಸುವ ಧೃಢಸಂಕಲ್ಪವನ್ನು ಎತ್ತಿ ಹಿಡಿಯುವ ಪ್ರಮಾಣವಚನವನ್ನು ಬೋಧಿಸಲಾಯಿತು. ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ಉಡುಗೆ ತೊಡುಗೆಗಳನ್ನುಟ್ಟು ‘ ಸಾಂಪ್ರದಾಯಿಕ ದಿನ’ ವನ್ನಾಗಿಯೂ ಆಚರಿಸಿದ ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ ಕುಮಾರ ಶೆಟ್ಟಿಯವರು ಹಾಗೂ ಬೋಧಕ- ಬೋಧಕೇತರ ಸಿಬ್ಬಂಧಿಯವರು ಉಪಸ್ಥಿತರಿದ್ದರು.