ಕುಂದಾಪುರ : ಅಗಲಿದ ಆಸ್ಕರ್ ಫೆರ್ನಾಂಡಿಸ್ ಅವರಿಗೆ ಶ್ರದ್ದಾಂಜಲಿ

JANANUDI.COM NETWORK


ಕುಂದಾಪುರ, ಸೆ.26 ಇತ್ತೀಚೆಗೆ ಅಗಲಿದ ,ಕೇಂದ್ರ ಸರಕಾರದ ಮಾಜಿ ಸಚಿವರು,ರಾಜ್ಯಸಭಾ ಸದಸ್ಯರಾದ ಆಸ್ಕರ್ ಫೆರ್ನಾ೦ಡಿಸ್ ರವರಿಗೆ, ಶ್ರದ್ಧಾಂಜಲಿ ಕಾರ್ಯಕ್ರಮ ದಿನಾಂಕ 26 -9-2021 ಆದಿತ್ಯವಾರ ರಂದು, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ , ಆರ್.ಎನ್. ಶೆಟ್ಟಿ ಕಲ್ಯಾಣ ಭವನದಲ್ಲಿ ಜರುಗಿತು.


ಮಾಜಿ ವಿಧಾನ ಪರಿಶತ್ತಿನ ಸ್ಪೀಕರ್ ಪ್ರತಾಪ್ ಚಂದ್ರ ಶೆಟ್ಟಿ ಪುಷ್ಪಾರ್ಚಣೆ ಮಾಡುವ ಮೂಲಕ ಆಸ್ಕರ್ ಫೆರ್ನಾ೦ಡಿಸ್ ರವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಶ್ರದ್ದಾಂಜಲಿ ಅರ್ಪಿಸುತ್ತಾ ” ಸಂಸತ್ತಿನಲ್ಲಿ ಆಸ್ಕರ್ ಫೆರ್ನಾಂಡಿಸ್ ಅವರನ್ನು ಅಣ್ಣ ಅಂತಾ ಕರೆಯುತಿದ್ದರು, ಅವರ ಗುಣ ನಡೆತೆಯೇ ಈ ಗೌರವ ಅವರಿಗೆ ಸಿಗಲು ಕಾರಣವಾಗಿದೆ, ಅವರಲ್ಲಿ ಜನರಿಗೆ ಪ್ರೀತಿ ವಿಶ್ವಾಸ ಇತ್ತು, ಅವರು ಧರ್ಮ ಕಟ್ಟಳೆಗಳನ್ನು ಮೀರಿ ಬೆಳೆದವರು. ಅಷ್ಟ ಮಠ ಸ್ವಾಮಿಗಳಲ್ಲಿ ಅವರು ಬಹಳ ಪ್ರೀತಿ ಪಾತ್ರರು. ರಾಜಕೀಯದಲ್ಲಿ ನಂಬಿಕೆ ವಿಶ್ವಾಸಕ್ಕೆ ಯೋಗ್ಯರಾಗಿದ್ದರು, ಗಾಂಧಿ ಕುಟುಂಬದಲ್ಲಿ ಅಂತ್ಯಂತ ವಿಶ್ವಾಸಿಗರಲ್ಲಿ ಒಬ್ಬರಾಗಿದ್ದು ಅವರು ಸುಮಾರು 41 ವರ್ಷಗಳ ಸುಧೀರ್ಘ ರಾಜಕೀಯದಲ್ಲಿ ಶುದ್ಧ ಹಸ್ತರಾಗಿದ್ದರು” ಎಂದು ಅವರ ದುಃಖ ತೃಪ್ತ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಮಾಜಿ ಬೈಂದೂರಿನ ಶಾಶಕ ಗೋಪಾಲ ಪೂಜಾರಿ “ಆಸ್ಕರ್ ಫೆರ್ನಾಂಡಿಸ್ ರಾಜಕೀಯದಲ್ಲಿ ಕಪ್ಪು ಚುಕ್ಕೆ ಇಲ್ಲದಂತಹ ರಾಜಕಾರಣಿ ಆಗಿದ್ದರು” ಎಂದು ಬಣ್ಣಿಸಿದರು. ಮಲ್ಯಾಡಿ ಶಿವರಾಮ ಶೆಟ್ಟಿ, ಹಿರಿಯಣ್ಣ, ವಿಕಾಸ್ ಹೆಗ್ಡೆ, ಶ್ಯಾಮಲಾ ಭಂಡಾರಿ ಮತ್ತು ಇನ್ನಿತರ ಕಾಂಗ್ರೆಸ್ ನಾಯಕರು ಆಸ್ಕರ್ ಅವರಿಗೆ ಶ್ರದ್ದಾಂಜಲಿ ಅರ್ಪಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸಿನ ಅನೇಕ ನಾಯಕರು ಭಾಗವಹಿಸದ್ದರು. ಬ್ಲಾಕ್ ಕಾಂಗ್ರೆಸ್ ಸಮಿತಿ ಕುಂದಾಪುರ ಇದರ ಅಧ್ಯಕ್ಷರಾದ ಕಾನಮಕ್ಕಿ ಹರಿ ಪ್ರಸಾದ ಶೆಟ್ಟಿ ಸ್ವಾಗತಿಸಿದರು, ನಾರಾಯಣ ಆಚಾರ್ಯ ವಂದಿಸಿದರು, ವಿನೋದ್ ಕ್ರಾಸ್ಟಾ ಕಾರ್ಯಕ್ರಮ ನಿರೂಪಿಸಿದರು.