ಕುಂದಾಪುರ : ಜನ ಔಷಧಿ ದಿನಾಚರಣೆ ಎರಡನೇ ದಿನ -ಚೈತನ್ಯ ವಿಶೇಷ ಶಾಲೆಗೆ ದೇಣಿಗೆ


ಕುಂದಾಪುರ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಶುಕ್ರಾವಾರದಂದು ಚೈತನ್ಯ ವಿಶೇಷ ಶಾಲೆಗೆ ಬೇಟಿ ನೀಡಿ ಶಾಲೆಗೆ ರೂಪಾಯಿ 15,000/- ದೇಣಿಗೆ ನೀಡಲಾಯಿತು. ಈ ದೇಣಿಗೆ ಯನ್ನು ಯುವ ರೆಡ್ ಕ್ರಾಸ್ ಸಂಯೋಜಕರಾದ ದಿನಕರ ಆರ್ ಶೆಟ್ಟಿ ಕೊಡಮಾಡಿದರು. ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿ ಯವರು ಮುಖ್ಯ ಶಿಕ್ಷಕರಾದ ಲೀಲಾ ಕರ್ಕಾಡಾ ಇವರಿಗೆ ಚೆಕ್ ಹಸ್ತಾಂತರಿಸಿದರು. ಕಾರ್ಯಕ್ರಮ ದಲ್ಲಿ ರೆಡ್ ಕ್ರಾಸ್ ನಿಂದ ಕಾರ್ಯದರ್ಶಿ ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಗಣೇಶ್ ಆಚಾರ್ಯ, ಡಾ. ಸೋನಿ, ಮುತ್ತಯ್ಯ ಶೆಟ್ಟಿ, ಸೀತಾರಾಮ ನಕತ್ತಾಯ, ಅಬ್ದುಲ್ ಬಶೀರ್, ಸದಾನಂದ ಶೆಟ್ಟಿ, ನಾರಾಯಣ ದೇವಾಡಿಗ ಮತ್ತು ಶಿಕ್ಷಕರು ಉಪಸ್ಥಿತರಿದ್ದರು.