

ಕುಂದಾಪುರ, ಜೂ, 1: ಕುಂದಾಪುರ ರೋಜರಿ ಮಾತಾ ಇಗರ್ಜಿಯಲ್ಲಿ ಕ್ರೈಸ್ತ ಶಿಕ್ಷಣ ಆರಂಭತ್ಸೋವವ ಕಾರ್ಯಕ್ರಮ ಜೂನ್ 1 ರಂದು ಇಗರ್ಜಿಯಲ್ಲಿ ನೆಡೆಯಿತು. ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ| ಪೌಲ್ ರೇಗೊ ಪಾಲನ ಮಂಡಳಿ ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಕುಂದಾಪುರ ಸಂತ ಜೋಸೆಪ್ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸುಪ್ರಿಯಾ ಹಲವಾರು ಶಿಕ್ಷಕಿಯರಲ್ಲಿ ಆರಿಸಲ್ಪಟ್ಟ ಕ್ರೈಸ್ತ ಶಿಕ್ಷಣ ನೀಡುವ ಒರ್ವ ಶಿಕ್ಷಕಿ, ಮಕ್ಕಳ ಸಮೇತ ಒಂದು ಕುಟುಂಬ, ಕ್ರೈಸ್ತ ಶಿಕ್ಷಣ ನೀಡುವ ಶಿಕ್ಷಕಿಯರ ಸಂಯೋಜಕಿ ವೀಣಾ ಡಿಸೋಜಾ ಇವರುಗಳು ಹೂ ಗೀಡಗಳಿಗೆ ನೀರು ಎರೆಯುವ ಮೂಲಕ ಕ್ರೈಸ್ತ ಶಿಕ್ಷಣದ ಶಿಕ್ಷಣಕ್ಕೆ ಚಾಲನೆಯನ್ನು ನೀಡಿದರು.
‘ನಮ್ಮ ಮಕ್ಕಳು ನೀತಿವಂತರಾಗಲು ಕ್ರೈಸ್ತ ಶಿಕ್ಷಣ ಅಗತ್ಯವಿದೆ, ಇದು ವಂಚೀತರಾಗದಿರಲು ಹೆತ್ತವರು ಶ್ರಮ ಪಡಬೇಕು, ನೀತಿ ಶಿಕ್ಷಣ ಮಾತ್ರ ಭಾಷೆಯಲ್ಲಿ ದೊರಕಿದರೆ, ಅದು ಆಳವಾಗಿ ಬೇರುರುತ್ತದೆ, ಮಕ್ಕಳಿ ಮಾತ್ರಭಾಷೆಯನ್ನು ಕಲಿಸಿರಿ, ಮನೆಯಲ್ಲಿ ಮಾತ್ರಭಾಷೆ ಮಾತನಾಡಿ, ಇವತ್ತಿನ ಮಕ್ಕಳಿಗೆ ಕೊಂಕಣಿ, ಕನ್ನಡ ಒದಲು ಬರುವುದಿಲ್ಲಾ, ಈ ಭಾಷೆಗಳ ಅಗತ್ಯವಿದೆ. ನಾವು ಒಳ್ಳೆಯದನ್ನು ಮಾಡಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ, ಅದರಂತೆ ನಾವು ಒಳ್ಳೆಯದನ್ನು ಮಾಡುವ’ ಫಾ।ರೇಗೊ ಸಂದೇಶ ನೀಡಿದರು.
ಶಿಕ್ಷಕಿಯರು ಪ್ರತಿಜ್ಞಾ ಸ್ವೀಕಾರ ಮಾಡಿದರು. ಅವರನ್ನು ಗುರುಗಳು ಆಶಿರ್ವದಿಸಿದರು. ಶಿಕ್ಷಕಿ ಪ್ರೀತಿ ಕ್ರಾಸ್ತಾ ಕಾರ್ಯಕ್ರಮ ನಿರ್ವಹಿಸಿದರು.






















