ಕುಂದಾಪುರ ರೋಜರಿ ಕ್ರೆಡಿಟ್ ಕೋ- ಆಪರೇಟಿವ್ ವಾರ್ಷಿಕ ಸಭೆ-500 ಕೋಟಿ ವ್ಯವಹಾರ 2 ಕೋಟಿ 10 ಲಕ್ಷ ನಿವ್ವಳ ಲಾಭ ಶೇ. 20% ಡಿವಿಡೆಂಡ್ ಘೋಷಣೆ.

ಕುಂದಾಪುರ ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ 2021-22ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಂಘದ ಸದಸ್ಯರಿಗೆ ಶೇ. 20 % ಡಿವಿಡೆಂಡ್ ಘೋಷಿಸಲಾಯಿತು

ಕುಂದಾಪುರದ ಆರ್ ಎನ್ ಶೆಟ್ಟಿ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಶ್ರೀ ಜಾನ್ಸನ್ ಡಿ’ ಅಲ್ಮೇಡಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಘದ ನಿರ್ದೇಶಕ ಶ್ರೀ ಡೇರಿಕ್ ಡಿ ಸೋಜಾ ಪರಿಶೋಧಿತ ಲೆಕ್ಕಪತ್ರಗಳನ್ನು ಮಂಡಿಸಿದರು ವರದಿ ಸಾಲಿನ ಅಂತ್ಯಕ್ಕೆ ಒಟ್ಟು 3940 ಸದ್ಯಸ್ಯರಿಂದ 91.87 ಲಕ್ಷ ಪಾಲು ಬಂಡವಾಳ ಹಾಗೂ 122.59 ಕೋಟಿ ರೂ ಠೇವಣಿ ಇದ್ದು 98.43 ಕೋಟಿ ಹೊರಬಾಕಿ ಸಾಲ ಹೊಂದಿರುತ್ತದೆ.
2022 ರ ಆಗಸ್ಟ್ ಅಂತ್ಯಕ್ಕೆ ಒಟ್ಟು ರೂಪಾಯಿ 130 ಕೋಟಿ ಠೇವಣಿ ಹಾಗೂ ರೂ 106 ಕೋಟಿ ಸಾಲ ಇದೆ.
ವರದಿ ಸಾಲಿನಲ್ಲಿ ಸಂಘವು ರೂ 2 ಕೋಟಿ 11 ಲಕ್ಷ ನಿವ್ವಳ ಲಾಭವನ್ನು ಗಳಿಸಿದೆ ಎಂದು ಸಂಘದ ಅಧ್ಯಕ್ಷರು ಸಭೆಯಲ್ಲಿ ತಿಳಿಸಿದರು.
ಕಳೆದ ಸಾಲಿನಲ್ಲಿ ಸಂಸ್ಥೆ ಒಟ್ಟು ರೂಪಾಯಿ 500 ಕೋಟಿ ವ್ಯವಹಾರ ಮಾಡಿದೆ ಈವರೆಗೆ ಉಡುಪಿ ಜಿಲ್ಲೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೊಸೈಟಿ ಇನ್ನು ಮುಂದೆ ಇತರ ಜಿಲ್ಲೆಗಳಿಗೆ ವಿಸ್ತರಿಸಲು ಹಾಗೂ ಬಾಕಿ ಇರುವ ಶಾಖೆಗಳಿಗೆ ಸ್ವಂತ ಕಟ್ಟಡ, ಗ್ರಾಹಕರ ಅನುಕೂಲಕ್ಕಾಗಿ ಹೊಸ ಶಾಖೆ, ಸಂಘದ ಮುಂದಿನ ಭವಿಷ್ಯಕ್ಕಾಗಿ ಕುಂದಾಪುರದ ಆಸುಪಾಸಿನಲ್ಲಿ ಒಂದು ಸ್ವಂತ ಜಾಗ ಖರೀದಿ, ಸಂಘದ ಪ್ರಧಾನ ಕಛೇರಿಯ ಮೂರನೇ ಅಂತಸ್ತಿನಲ್ಲಿ ಸಭಾಂಗಣ ಮಾಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ನುಡಿದರು. ಸಂಘದ ಮುಖ್ಯ ಸಲಹದಾರರಾದ ಅತೀ ವಂದನಿಯ ಸ್ಟೇನಿ ತಾವ್ರೋ ರವರು ಪ್ರಗತಿಗೆ ಮುಖ್ಯ ಕಾರಣ ಉತ್ತಮ ನಿರ್ದೇಶನ ಹಾಗೂ ಸಿಬ್ಬಂದಿಗಳ ಕಾರ್ಯತತ್ಪರತೆ ಮತ್ತು ಗ್ರಾಹಕರ ಪ್ರಾಮಾಣಿಕತೆಗೆ ಸಂಘವು ಇಷ್ಟು ಎತ್ತರಕ್ಕೆ ಬೆಳೆಯಲು ಕಾರಣವಾಯಿತು , ಅಲ್ಲದೆ ಮುಂದೆಯೂ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಹರಸಿದರು

ಸಂಘದ ಸ್ಥಾಪಕ ಹಾಗೂ ಪ್ರಸ್ತುತ ನಿರ್ದೇಶಕರಾದ ಶ್ರೀ ಫಿಲಿಪ್ ಡಿ ಕೋಸ್ಟಾ ಸ್ವಾಗತಿಸಿದರು, ನಿರ್ದೇಶಕ ಶ್ರೀ ವಿಲ್ಸನ್ ಡಿ ಸೋಜಾ ಪ್ರಾಸ್ತವಿಕ ಭಾಷಣ ನುಡಿದರು ನಿರ್ದೇಶಕಿ ಶ್ರೀಮತಿ ಡೈನಾ ಡಿ ಅಲ್ಮೇಡ ವಂದನಾರ್ಪಣೆ ಮಾಡಿದರು ನಿರ್ದೇಶಕಿ ಶ್ರೀಮತಿ ಶಾಂತಿ ಆರ್ ಕರ್ವಾಲ್ಲೊ , ಶ್ರೀ ಕಿರಣ್ ಮೇಲ್ವಿನ್ ಲೋಬೋ ಕಾರ್ಯಕ್ರಮ ನಿರೂಪಿಸಿದರು
ಸಭೆಯಲ್ಲಿ ಸಂಘದ ನಿರ್ದೇಶಕರಾದ ಶ್ರೀ ವಿನೋದ್ ಕ್ರಾಸ್ಟೋ, ಶ್ರೀ ಬ್ಯಾಪ್ಟಿಸ್ಟ್ ಡಾಯಾಸ್, ಶ್ರೀ ಓಜಲಿನ್ ರೆಬೆಲ್ಲೊ, ಶ್ರೀ ಪ್ರಕಾಶ್ ಲೋಬೋ, ಶ್ರೀಮತಿ ಶಾಂತಿ ಡಾಯಾಸ್, ಶ್ರೀ ಸಂತೋಷ್ ಓಝೋಲ್ಡ ಡಿ ಸಿಲ್ವಾ, ಶ್ರೀ ವಿಲ್ಫ್ರೆಡ್ ಮಿನೇಜಸ್, ಶ್ರೀ ಟೆರೆನ್ಸ್ ಸುವಾರಿಸ್, ಮತ್ತು ಶ್ರೀ ತಿಯೋದರ ಒಲಿವೇರ ಉಪಸ್ಥಿತರಿದ್ದರು.