ಕುಂದಾಪುರ: ಸೆಕ್ಯೂಲರ್ ಧರ್ಮಗುರುಗಳ ಪಾಲಕ ಸಂತ ವಿಯಾನ್ನಿಯ ಸ್ಮರಣೆ : ಧರ್ಮಗುರುಗಳಿಗೆ ಅಭಿನಂದನೆ

ಕುಂದಾಪುರ, ಆ.4: ಸ್ಥಳೀಯ ಪವಿತ್ರ ರೋಜರಿ ಮಾತಾ ಇಗರ್ಜಿಯಲ್ಲಿ ಮಂಗಳೂರು ಮತ್ತು ಉಡುಪಿ ಧರ್ಮಪ್ರಾಂತ್ಯದ ಸೆಕ್ಯೂಲರ ಮೇಳದ ಧರ್ಮಗುರುಗಳ ಪಾಲಕ ಸಂತ ಜೋನ್ ಬ್ಯಾಪ್ಟಿಸ್ಟ್ ಮಾರೀ ವಿಯಾನ್ನಿ ಇವರು ಇಹ ಲೋಕ ತ್ಯಜಿಸಿದ ದಿನ ಅಗೋಸ್ತ್ 4 ರಂದು ಕುಂದಾಪುರ ಇಗರ್ಜಿಯ  ಧರ್ಮಗುರುಗಳು ಬಲಿಪೂಜೆಯನ್ನು ಅರ್ಪಿಸಿ ಅವರ ಸ್ಮರಣೆ ಆಚರಿಸಿದರು.
       ಇಗರ್ಜಿಯ ಸಹಾಯಕ ಧರ್ಮಗುರು ವಂ| ಅಶ್ದಿನ್ ಆರಾನ್ನ  ಪವಿತ್ರ ಬಲಿದಾನವನ್ನು ಅರ್ಪಿಸಿ “ನಮಗಾಗಿ ನಿಮ್ಮ ಪ್ರಾರ್ಥನೆಗಳು ಅಗತ್ಯವಾಗಿವೆ, ನಾವು ನಮ್ಮ ಗುರು ದಿಕ್ಷೆಯನ್ನು ಸರಿಯಾಗಿ ಮುನ್ನೆಡೆಸಿಕೊಂಡು ಹೋಗಲು, ನಮಗೆ ನಿಮ್ಮ ಪ್ರಾರ್ಥನೆ ಅಗತ್ಯವಿದೆಯೆಂದು” ತಿಳಿಸಿದರು. ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ಬಲಿದಾನವನ್ನು ಸಹ ಬಲಿದಾನವನ್ನು ಅರ್ಪಿಸಿ ದೊಡ್ಡ ಸಂಖ್ಯೆಯಲ್ಲಿ ಪೂಜೆಗೆ ಆಗಮಿಸಿದಕ್ಕೆ ಮತ್ತು ಅಭಿನಂದ ಸಲ್ಲಿಸಿದ್ದಕ್ಕೆ ಕ್ರತ್ಜತೆ ಸಲ್ಲಿಸಿದರು.
     ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಇನ್ನಿತರ ಧರ್ಮ ಭಗಿನಿಯರು, ಪಾಲನ ಮಂಡಳಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆಯಾದ ಸಿಸ್ಟರ್ ಸುಪ್ರಿಯಾ,  ಇತರ ಧರ್ಮ ಭಗಿನಿಯರು, ವಾಳೆಯ ಗುರಿಕಾರರು, ಪಾಲನ ಮಂಡಳಿ ಸದಸ್ಯರು ಹಾಗೂ ಭಕ್ತಾಧಿಗಳು ಹಾಜರಿದ್ದು ಧರ್ಮಗುರುಗಳನ್ನು ಅಭಿನಂದಿಸಿದರು.