ಭಾ.ಜನೌಷಧಿ ಕೇಂದ್ರ, ಕಸ್ತೂರ್ಬಾ ಆಸ್ಪತ್ರೆ ಸಹಯೋಗದೊಂದಿಗೆ ಕುಂದಾಪುರ ರೆಡ್ ಕ್ರಾಸ್ ಉಚಿತ ಆರೋಗ್ಯ ತಪಾಸಣಾ ಶಿಬಿರ

JANANUDI.COM NETWORK

ಕುಂದಾಪುರ, ಮಾ.6: ಭಾರತೀಯ ಜನೌಷಧಿ ಕೇಂದ್ರ, ಕಸ್ತೂರ್ಬಾ ಆಸ್ಪತ್ರೆ ಸಹಯೋಗದೊಂದಿಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಚಿತ ಆರೋಗ್ಯ ತಪಾಸಣಾ ಶಿಬಿರವು ಸ್ಥಳೀಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಸಿತು. ಇದರ ಉದ್ಘಾಟನೆಯನ್ನು ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ಡಾ.ಉಮೇಶ್ ಪುತ್ರನ್ ಮಾಡಿದರು.
ಈ ಶಿಬಿರದಲ್ಲಿ ಎಲುಬು ಮತ್ತು ಕೀಲು ರೋಗ ತಜ್ಞರು, ಹೃದ್ರೋಗ ತಜ್ಞರು, ಹಿರಿಯ ವೈದಕೀಯ ತಜ್ಞರು, ಹಿರಿಯ ಪ್ರಸೂತಿ ಹಾಗೂ ಸ್ತೀರೋಗ ತಜ್ಜರು, ಚರ್ಮರೋಗ ತಜ್ಞರು ಮಧುಮೇಹ ತಜ್ಞರು, ಭಾಗವಹಿಸಿದ್ದು, ರಕ್ತದೊತ್ತಡ ಹಾಗೂ ಇ.ಸಿ.ಜಿ. ಪರೀಕ್ಷೆ ಕೂಡ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಡಾ.ನಿತೀಶ್ ಪ್ರಭು ಕೆಎಂಸಿ ಮಣಿಪಾಲ, ಕುಂದಾಪುರ ರೆಡ್ ಕ್ರಾಸ್ ಅಧ್ಯಕ್ಷ ಎಸ್.ಜಯಕರ ಶೆಟ್ಟಿ, ಸದಸ್ಯರಾರ ಗಣೇಶ್ ಆಚಾರ್ಯ, ಎ.ಎಂ.ಶೆಟ್ಟಿ, ಸೀತಾರಾಮ ನಕತ್ತಾಯ, ಸದಾನಂದ ಶೆಟ್ಟಿ, ನಾರಾಯಣ ದೇವಾಡಿಗ ಉಪಸ್ಥಿತರಿದ್ದರು. ಡಾ. ಸೋನಿ ಡಿ ಕೋಸ್ಟಾ ನಿರೂಪಿಸಿ ವಂದಿಸಿದರು.