ಕುಂದಾಪುರ:ಸರಕಾರದ ಆದೇಶದಂತೆ ಮಾರ್ಚ್ ಒಂದರಿಂದ ಮಾರ್ಚ್ ಏಳರ ವರೆಗೆ ಜನ ಔಷಧಿ ದಿವಸ ಆಚರಣೆ

ಕುಂದಾಪುರ ಮಾ.2: ಸರಕಾರದ ಆದೇಶದಂತೆ ಮಾರ್ಚ್ ಒಂದರಿಂದ ಮಾರ್ಚ್ ಏಳರ ವರೆಗೆ ಜನ ಔಷಧಿ ದಿವಸ ಆಚರಣೆ ಆರಂಬಿಸಲಾಯಿತು. ಇದರ ಉದ್ಘಾಟನೆ ಯನ್ನು ತಾರೀಖು ಒಂದರಂದು ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರ ದಲ್ಲಿ ಮನೋರೋಗ ತಜ್ಞರಾದ ಡಾ. ಸುಕದಾ ಉಪಾಧ್ಯಾಯ ಇವರಿಂದ ನೆರವೇರಿತು.

ರೆಡ್ ಕ್ರಾಸ್ ಸಭಾಪತಿ ಶ್ರೀ ಎಸ್. ಜಯಕರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಉದ್ಘಾಟಕರು ಕಾರ್ಯಕ್ರಮಕ್ಕೆ ಶುಭ ಕೋರಿದರು. ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ ವಂದಿಸಿದರು. ಕಾರ್ಯಕ್ರಮ ದಲ್ಲಿ ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರು ಗಳಾದ ಗಣೇಶ ಆಚಾರ್ಯ, ಮುತ್ತಯ್ಯ ಶೆಟ್ಟಿ, ಡಾ. ಸೋನಿ, ಸದಾನಂದ ಶೆಟ್ಟಿ, ಸೀತಾರಾಮ ನಕತ್ತಾಯ, ನಾರಾಯಣ ದೇವಾಡಿಗ ದಿನಕರ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಶಂಕರ ಶೆಟ್ಟಿ ಮತ್ತು ಸಿಭಂದಿಗಳು ಉಪಸ್ಥಿತರಿದ್ದರು. ನೆರೆದ ಗ್ರಾಹಕ ಬಂಧುಗಳಿಗೆ ಸಿಹಿ ಹಂಚಲಾಯಿತು.