ಕುಂದಾಪುರ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವಿಶ್ವ ರಕ್ತ ದಾನಿಗಳ ದಿನಾಚರಣೆ

JANANUDI.COM NETWORK

ಕುಂದಾಪುರ: ವಿಶ್ವ ರಕ್ತ ದಾನಿಗಳ ದಿನಾಚರಣೆ ಯನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾರೀಖು 14-06-2022 ರಂದು ರೆಡ್ ಕ್ರಾಸ್ ರಕ್ತ ನಿಧಿ ಕೇಂದ್ರ ದಲ್ಲಿ ಆಚರಿಸಲಾಯಿತು. ಇಪ್ಪತ್ತಕ್ಕಿಂತಲೂ ಹೆಚ್ಚು ಬಾರಿ ರಕ್ತ ದಾನ ಮಾಡಿದ ಎಂಟು ಜನರನ್ನು ಸನ್ಮಾನಿಸಲಾಯಿತು.

ಈ ಸನ್ಮಾನ ಕಾರ್ಯ ಕ್ರಮದಲ್ಲಿ ಸಭಾಪತಿ ಎಸ್ ಜಯಕರ ಶೆಟ್ಟಿ, ಉಪ ಸಭಾಪತಿ ಡಾ. ಉಮೇಶ್ ಪುತ್ರನ್, ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರು ಗಳಾದ ಗಣೇಶ್ ಆಚಾರ್ಯ, ಶಾಂತಾರಾಂ ಪ್ರಭು, ಡಾ. ಸೋನಿ, ಸಂತೋಷ ಶೆಟ್ಟಿ, ಸೀತಾರಾಮ ನಕ್ಕತ್ತಾಯ, ಸತ್ಯನಾರಾಯಣ ಪುರಾಣಿಕ್ ಉಪಸ್ಥಿತರಿದ್ದರು.

ಸಂದೇಶ ಶೇಟ್ 59 ಸಲ, ಸುಧಾಕರ ಪೂಜಾರಿ 44 ಸಲ, ಸುಬ್ರಹ್ಮಣ್ಯ ಭಟ್ 43 ಸಲ, ರಾಮಚಂದ್ರ ದೇವಾಡಿಗ 40 ಸಲ, ಅಶ್ವಿನ್ ನಾಯಕ್ 40 ಸಲ, ಜಯಚಂದ್ರ ಆಚಾರ್ಯ 32 ಸಲ, ಪ್ರಶಾಂತ್ 20 ಸಲ ಮತ್ತು ಪುಂಡಲೀಕ್ ಮೊಗವೀರ 12 ಸಲ ರಕ್ತದಾನ ಮಾಡಿದವರನ್ನು ಸನ್ಮಾನಿಸಲಾಯಿತು. ಸಭಾಪತಿ ಗಳು ಸ್ವಾಗತಿಸಿದರು ಮತ್ತು ಕಾರ್ಯದರ್ಶಿ ಗಳ ಧನ್ಯವಾದ ಹಾಗೂ ಉಪಹಾರದ ನಂತರ ಕಾರ್ಯಕ್ರಮ ಮುಕ್ತಾಯ ಗೊಂಡಿತು.