

ಕುಂದಾಪುರ :ಮುಸ್ಲಿಮರ ಪವಿತ್ರ ಮಾಸವಾದ ರಮಝಾನ್ ತಿಂಗಳ ಉಪವಾಸ ವ್ರತಚಾರಣೆಯ ಈದುಲ್ ಫಿತರ್ ಹಬ್ಬವನ್ನು ಮುಸ್ಲಿಂ ಬಾಂಧವರು ಸಂಭ್ರಮ ದಿಂದ ಆಚರಿಸಿದರು.
ಬೆಳಿಗ್ಗೆ ಕುಂದಾಪುರ ಜಾಮೀಯ ಮಸೀದಿ ಯಿಂದ ಹೊರಟ ಸ್ವಲಾತ್ ಮೆರವಣಿಗೆಯು ಜಮಾತ್ ಅಧ್ಯಕ್ಷರಾದ ವಸೀಮ್ ಬಾಷಾ, ಪದಾಧಿಕಾರಿಗಳಾದ ತಬರೇಜ್, ಪುರಸಭಾ ಸದಸ್ಯ ಎಂ.ಅಬು ಮಹ್ಮದ್ ಮುಂತಾದವರ ಮುಂದಾಳತ್ವದಲ್ಲಿ ಮುಖ್ಯ ಬೀದಿಯ ಮೂಲಕ ಸಾಗಿ ಈದ್ಗ ಮೈದಾನವನ್ನು ತಲುಪಿತು. ಜಮಾತಿನ ಖತೀಬರಾದ ಶಾಹೀದ್ ಹುಸೇನ್ ಅವರು ಈದ್ ನಮಾಜ್ ನೆರವೇರಿಸಿ ಸಕಲರ ಕಲ್ಯಾಣ, ಶಾಂತಿ, ನೆಮ್ಮದಿ ಗಾಗಿ ದುವಾ ಮಾಡಿದರು.

ಇದೇ ಸಂದರ್ಭದಲ್ಲಿ ಈದ್ಗ ಮೈದಾನಕ್ಕೆ ವಿಶೇಷವಾಗಿ ಭೇಟಿ ನೀಡಿದ ಕುಂದಾಪುರ ಚರ್ಚ್ ಗುರುಗಳಾದ ರೆ.ಫಾದರ್ ಪೌಲ್ ರೇಗೋ ಅವರು ಶಾಂತಿ, ಸಹೋದರತೆಯ ಸಂದೇಶ ಸಾರುವ ಈದ್ ಶುಭಾಶಯಗಳನ್ನು ಮುಸ್ಲಿಂ ಬಾಂಧವರ ಜತೆ ಹಂಚಿಕೊಂಡರು.
ಈ ಸಂದರ್ಭ ದಲ್ಲಿ ಕುಂದಾಪುರ ಕೆಥೋಲಿಕ್ ಸಭಾದ ಅಧ್ಯಕ್ಷ ವಿಲ್ಸನ್ ಡಿ. ಅಲ್ಮೆಡಾ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷೆ ಶಾಲೇಟ್ ಫೆರ್ನಾಂಡಿಸ್, ಮುಸ್ಲಿಂ ಹಿರಿಯರಾದ ಏ. ಕೆ. ಅಬ್ದುಲ್ ಖಾದರ್ ಯೂಸುಫ್, ಶೇಕ್ ಫರೀದ್ ಬಾಷಾ, ಬಿ. ಹಾರೂನ್ ಸಾಹೇಬ್ ಹಾಗೂ ಇತರ ಧುರೀ ಣರು ಉಪಸ್ಥಿತರಿದ್ದು ಸರ್ವರಿಗೂ ಈದ್ ಶುಭಾಶಗಳನ್ನು ಕೋರಿದರು.


