ಕುಂದಾಪುರ ಕಾಂಗ್ರೆಸಿಂದ ಗ್ರಾಮ ಪಂಚಾಯ್ತ್ ಚುನಾವಣೆಯಲ್ಲಿ ಗೆದ್ದವರಿಗೂ ಸ್ಪರ್ಧಿಸಿದವರಿಗೂ ಅಭಿನಂದನ ಕಾರ್ಯಕ್ರಮ

JANANUDI.COM NETWORK


ಕುಂದಾಪುರ, ಮಾ.29: ಇತ್ತೀಚೆಗೆ ನಡೆದ ಗ್ರಾಮಾ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧೆಯಲ್ಲಿ ಅಭ್ಯರ್ಥಿಯಾಗಿ ನಿಂತ ಮತ್ತು ಜಯಗೊಳಿಸಿದವರಿಗೆ ಸನ್ಮಾನದ ಕಾರ್ಯಕ್ರಮ ಆರ್.ಎನ್.ಶೆಟ್ಟ್ಯ್ ಸಭಾಭವನದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ವಿಧಾನ ಸಭಾದ ಮಾಜಿ ಸ್ಪೀಕರ್ ಪ್ರತಾಪ್ ಚಂದ್ರ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಸನ್ಮಾನ ಕಾರ್ಯಕ್ರಮದ ನೇತ್ರತ್ವ ವಹಿಸಿ ‘ಪಂಚಾಯ್ತಿ ಚುನಾವಣೆ ಎಂಬುದು ನಮ್ಮ ನೆರೆ ಹೊರೆಯ ಸಂಬಂಧ ಇದ್ದಂತೆ, ಅದಕ್ಕೆ ನಾವು ನೆರೆಹೊರೆಯರಲ್ಲಿ ಒಳ್ಳೆಯ ಸಂಬಂಧ್ದ ಇಟ್ಟುಕೊಳ್ಳಬೇಕು, ಅವರಿಗೆ ಬೇಕಾದ ಸವಲತ್ತುಗಳನ್ನು, ಸಿಗುವಲ್ಲಿ ಶ್ರಮಿಸಬೇಕು, ಇದು ಧನಕ್ಕಿಂತ ನೀವು ಜಯಗೊಳಿಸಲು ಉಪಕಾರಿಯಾಗುತ್ತದೆ’ ಎಂದು ಅವರು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು ‘ಪ್ರತಾಪ್ ಚಂದ್ರ ಶೆಟ್ಟಿ ನಮ್ಮ ಜೊತೆಗಿರುವುದು ನಮಗೆ ಹೆಚ್ಚಿನ ಬಲ ಬಂದಿದೆ, ಕಾಂಗ್ರೆಸ್ ಪಕ್ಷ ಪ್ರಮಾಣಿಕವಾಗಿದೆ ಎಂದರು. ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಮಾತನಾಡಿ ‘ಕಾಂಗ್ರೆಸ್ ಎಂಬುದೇ ಹೆಮ್ಮೆಯ ವಿಚಾರವಾಗಿದೆ’ ಎಂದರು. ಕಾಂಗ್ರೆಸಿನ ಕೆ. ಸದಾನಂದ ಅಭಿನಂದನ ಮಾತುಗಳನ್ನಾಡುತ್ತಾ ‘ನಮ್ಮ ಸೇವೆ ಪಂಚಾಯಿತಿ ಚುನಾವಣೆಯಲ್ಲಿ ಪ್ರಾಮುಖ್ಯತೆ ಹೊಂದಿರುತ್ತದೆ, ಪಕ್ಷ ಭೇದ ಮರೆತು ಸೇವಾ ಕಾರ್ಯ ಮಾಡಿರಿ, ಅದು ನಿಮ್ಮ ಮತವಾಗಿ ಪರಿಗಣಿಸುತ್ತೆ’ ಎಂದು ಹಿತವಚನ ನುಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ ಶೆಟ್ಟಿ ಅಧ್ಯಕ್ಷೀಯ ಭಾಷಣ ಮಾಡಿದರು. ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೇವಕಿ ಸಣ್ಣಯ್ಯ, ತಾ.ಪ. ಸದಸ್ಯೆ ಜ್ಯೋತಿ ಪುತ್ರನ್, ಶಾಲೆಟ್ ರೆಬೆಲ್ಲೊ, ಜಾನಕಿ ಬಿಲ್ಲವ, ಕೋಣಿ ಕ್ರಷ್ಣದೇವ ಕಾರಂತ, ಶಂಕರ ಪೂಜಾರಿ ಕೋಡಿ, ರಾಜಶೇಖರ ಶೆಟ್ಟಿ,ಅಮಾಸೆ ಬೈಲು ಕ್ರಷ್ಣ ಪೂಜಾರಿ, ಹಂಗಳೂರು ಸ್ಟೀವನ್ ಡಿಕೋಸ್ತಾ, ಅಸೋಕ ಪೂಜಾರಿ ಬೀಜಾಡಿ, ಕಿಸಾನ್ ಘಟಕದ ಅಧ್ಯಕ್ಷ ಭಾಸ್ಕರ ಶೆಟಿಮೊಗವೀರ,, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹಾರೂನ್ ಸಾಹೇಬ್, ಆನಗಳ್ಳಿ ಪಂಚಾಯತ್ ಅಧ್ಯಕ್ಷ ಲಾರೆನ್ಸ್ ಡಿಸೋಜಾ, ಕೋಣಿ ಪಂಚಾಯತ್ ಅಧ್ಯಕ್ಷೆ ವಸಂತಿ, ಕಾವ್ರಾಡಿ ಪಂ.ಅಧ್ಯಕ್ಷ ವಿಜಯ ಪುತ್ರನ್, ಶಿವ ಪೂಜಾರಿ, ವಿರೇಂದ್ರ ಬಿದ್ಕಲ್ ಕಟ್ಟೆ, ಕುಮಾರ್ ಖಾರ್ವಿ, ಕ್ರಷ್ಣ ಪೂಜಾರಿ,ಭಾಸ್ಕರ ಶೆಟ್ಟಿ,ಸತೀಶಾ ಜಪ್ತಿ, ಗಣೇಶ ಸೇರಿಗಾರ್, ಜಾನಕಿ ಬಿಲ್ಲವ,ಚಂದ್ರ ಅಮೀನ್ ಮೊದಲಾದವರಿದ್ದರು.

ಬ್ಲಾಕ್ ಕಾಂಗ್ರೆಸ್ ಪ್ರಧಾನ ವಿಕಾಸ್ ಹೆಗ್ಡೆ ಸ್ವಾಗತಿಸಿದರು. ಕೋಣಿ ನಾರಯಣ್ ಆಚಾರ್ ಸನ್ಮಾನಿತರ ಪರಿಚಯವನ್ನು ನೀಡಿದರು. ವಿನೋದ್ ಕ್ರಾಸ್ಟೊ ನಿರೂಪಿಸದರು. ಆಶಾ ಕರ್ವಾಲ್ಲೊ ಧನ್ಯದಾಗಳನ್ನು ಅರ್ಪಿಸಿದರು.