ಕುಂದಾಪುರ ಕಾಂಗ್ರೆಸ್: ಮಹಾತ್ಮಾ ಗಾಂಧಿ- ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ

JANANUDI.COM NETWORK

ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಮಹಾತ್ಮಾ ಗಾಂಧಿಯವರ 153ನೆಯ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀಜಿಯವರ 117ನೆಯ ಜನ್ಮ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಕುಂದಾಪುರ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ, ಹಿರಿಯ ಮುಖಂಡರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಶ್ಯಾಮಲಾ ಭಂಡಾರಿ, ಬ್ಲಾಕ್ ಕಾಂಗ್ರೆಸ್ ಖಜಾಂಚಿ ನಾರಾಯಣ ಆಚಾರ್, ಬ್ಲಾಕ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ, ಪುರಸಭಾ ಸದಸ್ಯರಾದ ಪ್ರಭಾವತಿ ಶೆಟ್ಟಿ ಮುಂತಾದವರು ಗಾಂಧಿ ಮತ್ತು ಶಾಸ್ತ್ರೀಯವರ ಚಿಂತನೆಗಳು ಮತ್ತದರ ಮಹತ್ವಗಳ ಕುರಿತು ಸಭೆಗೆ ವಿವರಿಸಿದರು.
ಈ ಸಂಧರ್ಭದಲ್ಲಿ ಕೆಪಿಸಿಸಿ ಸೋಶಿಯಲ್ ಮೀಡಿಯಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯೆ ಜಾನಕಿ ಬಿಲ್ಲವ, ಮಾಜಿ ಪುರಸಭಾ ಸದಸ್ಯ ಸುಭಾಷ್ ಪೂಜಾರಿ, ಪುರಸಭಾ ಸದಸ್ಯರಾದ ದೇವಕಿ ಸಣ್ಣಯ್ಯ, ಚಂದ್ರಶೇಖರ ಖಾರ್ವಿ, ನಗರ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಶೇರೆಗಾರ್, ಉಡುಪಿ ಜಿಲ್ಲಾ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಅಧ್ಯಕ್ಷ ರೋಷನ್ ಶೆಟ್ಟಿ, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೋಡಿ ಸುನಿಲ್ ಪೂಜಾರಿ, ಪುರಸಭಾ ಮಾಜಿ ಸದಸ್ಯ ಕೇಶವ ಭಟ್, ಮುಖಂಡರುಗಳಾದ ಕೆ.ಶಿವ ಕುಮಾರ್, ಶಶಿರಾಜ್ ಪೂಜಾರಿ, ಕೆ. ಸುರೇಶ್, ಅಭಿಜಿತ್ ಪೂಜಾರಿ, ಅಶೋಕ ಸುವರ್ಣ, ಕುಮಾರ ಕೆ., ಪ್ರಭಾಕರ ಕಡ್ಗಿಮನೆ, ಶೋಬಾ ಸಚ್ಚಿದಾನಂದ, ಸುಬ್ರಹ್ಮಣ್ಯ ಪಿ, ವಿಠ್ಠಲ ಕಾಂಚನ್, ಕೆ. ಸಚಿನ್ ಕುಮಾರ್, ಲಕ್ಷ್ಮಣ ಬರೇಕಟ್ಟು, ಚಂದ್ರ ಬರೇಕಟ್ಟು, ಕೆ. ಧರ್ಮಪ್ರಕಾಶ್, ಡಾಲ್ಫೀ ಡಿ’ಕೋಸ್ಟಾ, ಜೋಸ್ಟನ್ ಡಿ’ಸೋಜಾ, ಮುನಾಫ್ ಕೋಡಿ ಮುಂತಾದವರು ಉಪಸ್ಥಿತರಿದ್ದರು.
ಅಶ್ವಥ್ ಕುಮಾರ್ ಸ್ವಾಗತಿಸಿದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆಶಾ ಕರ್ವಾಲೋ ಧನ್ಯವಾದ ಸಮರ್ಪಿಸಿದರು.