ಕುಂದಾಪುರ ಕೋಡಿ: ಯುವಕನಿಗೆ ಅನ್ಯ ಕೋಮಿನ ಯುವಕರಿಂದ ಹಲ್ಲೆ

JANANUDI.COM NETWORK


ಕುಂದಾಪುರ : ಜೀವನ ನಿರ್ವಹಣೆಗಾಗಿ ಕೋಳಿ ಮಾಂಸವನ್ನು ವಿತರಣೆ ಮಾಡ್ತಿದ್ದ ಮೂಡುಗೋಪಾಡಿಯ ಜುನೈದ್ (21) ಎಂಬ ಯುವಕನನ್ನು ನಿಶ್ಠುರವಾಗಿ ಥಳಿಸಿದ ಘಟನೆ ಕುಂದಾಪುರ ಸಮೀಪದ ಕೊಡಿಯಲ್ಲಿ ನಡೆದಿದೆ.
ಇವರು ಪ್ರತಿದಿನದಂತೆ ಬುಧವಾರ ಮದ್ಯಾಹ್ನ 1.30 ರ ಸುಮಾರಿಗೆ ಮಹಿಂದ್ರಾ ಜೀಟೊ ವಾಹನದಲ್ಲಿ ಕೋಳಿ ಮಾಂಸ ವಿತರಿಸುತ್ತಾ ಕುಂದಾಪುರ ಚರ್ಚ್ ರಸ್ತೆಯಿಂದ ಕೋಡಿ ಕಡೆ ಹೋಗುತ್ತಿರುವಾಗ ಕೋಡಿ ಚಕ್ರೇಶ್ವರಿ ದೇವಸ್ಥಾನದ ಸಮೀಪ ಜುನೈದ್‍ನ ವಾಹನವು ಯಾಂತ್ರಿಕ ದೋಷದಿಂದ ರಸ್ತೆಯಲ್ಲೇ ನಿಂತು ಬಿಟ್ಟಿತು. ಅದನ್ನು ದೂಡಿ ವಾಹನ ಚಾಲೂ ಮಾಡಲು ಯತ್ನಿಸುತ್ತಿರುವಾಗ ಅದೇ ರಸ್ತೆಯ ವಿರುದ್ದ ದಿಕ್ಕಿನಿಂದ ಬಂದ ಗಿರೀಶ್ ಎಂಬ ಯುವಕ ವಾಹನವನ್ನು ಬದಿಗೆ ನಿಲ್ಲಿಸಲು ಹೇಳಿದರು. ಅದಕ್ಕೆ ಜುವೈದ್ ವಾಹನ ಕೆಟ್ಟಿದೆ, ಸ್ಟಾರ್ಟ್ ಆಗುತ್ತಿಲ್ಲ ದೂಡಬೇಕು, ತನ್ನೊಬ್ಬನಿಂದ ಸಾಧ್ಯವಾಗುತ್ತಿಲ್ಲ ಎಂದು ಹೇಳಿ, ಸ್ವಲ್ಪ ವಾಹನ ದೂಡಲು ವಿನಂತಿಸ್ಕೊಂಡರು.
ತನ್ನನ್ನೆ ವಾಹನ ದೂಡು ಎಂದು ಹೆಳಿದ ಕಾರಣ ಗಿರೀಶ್ ಕೋಪಗೊಂಡು ಕೈ ಯಿಂದ ಹಲ್ಲೆ ಮಾಡಿದರು. ಜುನೈದ್, ಗಿರೀಶ ಹತ್ತಿರ ತನ್ನ ಪರಿಸ್ಥಿತಿಯನ್ನು ವಿವರಿಸಿದರೂ ಕೇಳಿಸಿಕೊಳ್ಳುವ ತಾಳ್ಮೆ ಇಲ್ಲದೆ ಥಳಿಸಿದರು ಎನ್ನಲಾಗಿದೆ. ಇದೇ ವೇಳೆ ಗಿರೀಶ್ ಗೆಳೆಯ ಜಿತೇಂದ್ರ ಎನ್ನುವವನು ಅಲ್ಲಿಗೆ ಬಂದ ನಂತರ ಇಬ್ಬರೂ ಸೇರಿಕೊಂಡು ಜುನೈದ್ ಗೆ ಅವಾಚ್ಯ ಶಬ್ದಗಳಿಂದ ಬೈದು ಬಾಟ್ಲಿಯಿಂದ ಹಲ್ಲೆ ಮಾಡಿರುತ್ತಾರೆ’ ದೂರಲಾಗಿದೆ.