ಕುಂದಾಪುರ ಕಥೊಲಿಕ್ ಸಭಾ ವತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ

JANANUDI.COM NETWORK


ಕುಂದಾಪುರ,ಜ.31: ಕುಂದಾಪುರ ಕಥೊಲಿಕ್ ಸಭಾ ವತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ 2019 -20 ಸಾಲಿನಲ್ಲಿ ಎಸ್.ಎಸ್.ಎಲ್.ಸಿ, ಪಿ.ಯು.ಸಿ. ಪದವಿ, ವ್ರತ್ತಿಪರ ಪದವಿಸ್ನಾನಕೋತ್ತರ ಪದವಿಗಳಲ್ಲಿ ಉತ್ತಮ ಸಾಧನೆ ಗೈದ ಕುಂದಾಪುರ ಚರ್ಚಿನ ಪ್ರತಿಭಾವಂತ ವಿಧ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮ ಜನವರಿ 31 ರಂದು ಚರ್ಚ್ ವೆರಾಂಡದಲ್ಲಿ ನೆಡೆಯಿತು.
ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಸಾಧನೆ ಮಾಡಿದವರಿಗೆ ಸನ್ಮಾನಿಸಿ ಪುರಸ್ಕರಿಸಿ ಶುಭ ಹಾರೈಸಿದರು. ಕುಂದಾಪುರ ಕಥೊಲಿಕ್ ಸಭಾದ ಅಧ್ಯಕ್ಷ ಬರ್ನಾಡ್ ಡಿಕೋಸ್ತಾ ಸ್ವಾಗತಿಸಿದರು ಸಹಾಯಕ ಧರ್ಮಗುರು ವಂ| ವಿಜಯ್ ಡಿಸೋಜಾ ಪಾಲನ ಮಂಡಳಿ ಉಪಾಧ್ಯಕ್ಷ ಲುವಿಸ್ ಜೆ.ಫೆರ್ನಾಂಡಿಸ್ ಕಥೊಲಿಕ್ ಸಭಾದ ಪದಾಧಿಕಾರಿಗಳಾದ, ವಿನೋದ್ ಕ್ರಾಸ್ಟೊ, ಜೋನ್ಸನ್ ಡಿಆಲ್ಮೇಡಾ, ವಿಲ್ಸನ್ ಡಿಆಲ್ಮೇಡಾ, ವಿನಯಾ ಡಿಕೋಸ್ತಾ, ಡಾ|ಸೋನಿ ಡಿಕೋಸ್ತಾ, ಉಲ್ಲಾಸ್ ಕ್ರಾಸ್ತಾ ಮತ್ತಿತರ ಕಥೊಲಿಕ್ ಸಭಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕಿ ಶೈಲಾ ಡಿಆಲ್ಮೇಡಾ ನಿರೂಪಿಸಿದರು. ನಿಯೋಜಿತ ಅಧ್ಯಕ್ಷೆ ಜೂಲಿಯೆಟ್ ಪಾಯ್ಸ್ ವಂದಿಸಿದರು
.