ಕುಂದಾಪುರ:ಶಿಕ್ಷಣ ಕ್ಷೇತ್ರದ ಪ್ರತಿಭಾವಂತರಿಗೆ ಮತ್ತು ಭಾಷಣ ವಿಜೇತರಿಗೆ ಪುರಸ್ಕಾರ


ಕುಂದಾಪುರ,ಆ16: ಕುಂದಾಪುರ ಕಥೊಲಿಕ್ ಸಭಾ ವತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ಕುಂದಾಪುರ ರೋಜರಿ ಚರ್ಚಿನ ಎಸ್.ಎಸ್.ಎಲ್.ಸಿ, ಪಿ.ಯು.ಸಿ. ಪದವಿ, ವ್ರತ್ತಿಪರ ಪದವಿಸ್ನಾನಕೋತ್ತರ ಪದವಿಗಳಲ್ಲಿ ಉತ್ತಮ ಸಾಧನೆ ಗೈದ ವಿದ್ಯಾರ್ಥಿಗಳಿಗೆ ಹಾಗೂ ಭಾಷಣ ಸ್ಫರ್ಧೆಯಲ್ಲಿ ವಿಜೇತರಾದ ವಿಧ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.


ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಮತ್ತು ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ಸಾಧನೆ ಮಾಡಿದವರಿಗೆ ಸನ್ಮಾನಿಸಿ ಪುರಸ್ಕರಿಸಿ ಶುಭ ಹಾರೈಸಿದರು. ಕಥೊಲಿಕ್ ಸಭಾ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ, ವಾಲ್ಟರ್ ಡಿಸೋಜಾ, ನಿಕಟಪೂರ್ವ ಅಧ್ಯಕ್ಷ ಬರ್ನಾಡ್ ಡಿಕೋಸ್ತಾ, ಪದಾಧಿಕಾರಿಗಳಾದ ವಿನೋದ್ ಕ್ರಾಸ್ಟೊ, ವಾಲ್ಟರ್ ಡಿಸೋಜಾ,ಡಾ|ಸೋನಿ ಡಿಕೋಸ್ತಾ, ಜಾನ್ಸನ್ ಡಿಆಲ್ಮೇಡಾ ಜೂಲಿಯೆಟ್ ಪಾಯ್ಸ್, ಮೈಕಲ್ ಗೊನ್ಸಾಲ್ವಿಸ್, ಪಾಲನ ಮಂಡಳಿ ಉಪಾಧ್ಯಕ್ಷ ಲುವಿಸ್ ಫೆರ್ನಾಂಡಿಸ್ ಕಾರ್ಯದರ್ಶಿ ಆಶಾ ಕರ್ವಾಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ ಮತ್ತು ಕಥೊಲಿಕ್ ಸಭಾದ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯದರ್ಶಿ ಆಲ್ಡ್ರಿನ್ ಡಿಸೋಜಾ ವಂದಿಸಿದರು. ಕಾರ್ಯಕ್ರಮವನ್ನು ವಿಲ್ಸನ್ ಡಿಆಲ್ಮೇಡಾ ನಿರೂಪಿಸಿದರು.