ಕುಂದಾಪುರ : ವಿವಾಹಿತ ಪುರುಷನೊಂದಿಗೆ ಲೀವ್ ಇನ್ ರಿಲೇಶನ್ ಮಹಿಳೆ ಆತ್ಮಹತ್ಯೆ

ವರದಿ : ಮಝರ್, ಕುಂದಾಪುರ


ಕುಂದಾಪುರ : ವಿವಾಹಿತ ಪುರುಷನೊಂದಿಗೆ ಲೀವ್ ಇನ್ ರಿಲೇಶನ್ ನಲ್ಲಿದ್ದ ಮಹಿಳೆ ಯೋರ್ವಳು ತಾನು ವಾಸ್ತವ್ಯವಿದ್ದ ಬಾಡಿಗೆ ಮನೆಯೊಂದರಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೈದ ಪ್ರಕರಣ ನಿನ್ನೆ ಬೆಳಿಗ್ಗೆ ಖಾರ್ವಿ ಕೇರಿಯಲ್ಲಿ ನಡೆದಿದೆ.
ಮೃತಳನ್ನು ಸುರೋಜಾ ಯಾನೆ ಪೂಜಾರಿ(36) ಎಂದು ಗುರ್ತಿಸಲಾಗಿದೆ.
ಮೂಲತಃ ಯಲ್ಲಾ ಪುರದವಳಾಗಿರುವ ಸರೋಜಾಳಿಗೆ ಮದುವೆಯಾಗಿ ಓರ್ವ ಪುತ್ರನಿದ್ದಾನೆ. ಪತಿಯು ತ್ಯಜಿಸಿ ಹೋದನಂತರ ಸಹೋದರಿಯೊಂದಿಗೆ ತ್ರಾಸಿಯಲ್ಲಿ ನೆಲೆ ನಿಂತ ಸರೋಜಾ ಕುಂದಾಪುರದ ಕೆಲವು ಅಂಗಡಿ ಗಳಲ್ಲಿ ಕೆಲಸಮಾಡಿ ಜೀವನ ನಡೆಸುತ್ತಿದ್ದಾಳೆನ್ನಲಾಗಿದೆ.

ಈ ಸಂದರ್ಭದಲ್ಲಿ ಹೊಸ ಬಸ್ ನಿಲ್ದಾಣ ಸಮೀಪದ ವೈನ್ ಶಾಪ್ ನಡೆಸುತ್ತಿದ್ದವನ ಪರಿಚಯವಾಗಿದ್ದು, ಬಾಡಿಗೆ ಮನೆಯಲ್ಲಿ ಸರೋಜಾಳನ್ನು ಇರಿಸಿದ ಈತ ಅವಳಿಗೆ ಕುಡಿತದ ಚಟವನ್ನು ಕಲಿಸಿ ಲೈಂಗಿಕವಾಗಿ ಬಳಸಿಕೊಳ್ಳಲಾರಂಭಿಸಿದ್ದಾನೆ. ಪತಿಯ ಹಗ್ಗ ಕಡಿಯುವ ಚಾಳಿ ಆತನ ಪತ್ನಿಗೆ ತಿಳಿದು ರಂಪಾಟ ವಾದ್ದರಿಂದ ಸರೋಜಾಳನ್ನು ದೂರ ವಿಡುವ ಪ್ರಯತ್ನ ಮಾಡಿದ್ದಾನೆ. ಆದರೆ ಅದಾಗಲೇ ಕುಡಿತಕ್ಕೆ ಸಂಪೂರ್ಣ ಶರಣಾಗತಳಾಗಿದ್ದ ಸರೋಜ ಪ್ರತಿ ದಿನ ಎಂಬಂತೆ ಈತನ ವೈನ್ ಶಾಪ್ ಹತ್ತಿರ ಬಂದು ಜಗಳಕ್ಕೆ ನಿಲ್ಲುತ್ತಿದ್ದಳು. ಪ್ರಕರಣ ಪೊಲೀಸ್ ಠಾಣೆಯ ತನಕವೂ ತಲುಪಿ ಅದಾಗಲೇ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಈಕೆಯನ್ನು ಉಡುಪಿ ನಿಟ್ಟೂರಿನ ಮಹಿಳಾ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾದರೆ, ಮಗುವನ್ನು ನಮ್ಮಭೂಮಿ ಸಂಸ್ಥೆಗೆ ಸೇರಿಸಲಾಗಿತ್ತು. ಆದರೆ ಮತ್ತೆ ಸರೋಜಾಳ ಸಂಪರ್ಕ ಕಕ್ಕೆ ಬಂದ ವೈನ್ ಶಾಪ್ ನವನು  ಕೆಲವು ತಿಂಗಳ ಹಿಂದೆ ಖಾರ್ವಿಕೇರಿಯ ಬಾಡಿಗೆ ಮನೆಯೊಂದರಲ್ಲಿ ಇವಳನ್ನು ಇರಿಸಿ ಲೀವ್ ಇನ್ ರಿಲೇಶನ್ ನಲ್ಲಿ ದ್ದಾನೆನ್ನಲಾಗಿದೆ.

ಈ ನಡುವೆ ಕುಡಿತವನ್ನು ಸಂಪೂರ್ಣವಾಗಿ ತ್ಯಜಿಸಿದ ಸರೋಜಾ ಗರ್ಭವತಿಯಾಗಿದ್ದು, ಕೆಲವು ಸಮಯದ ಹಿಂದೆ ಗೋವಾದಲ್ಲಿ ಗರ್ಭಪಾತವನ್ನು ಮಾಡಿಕೊಂಡಿದ್ದಾಳೆ. ಇತ್ತಿಚಿನ ದಿನಗಳಲ್ಲಿ ತೀವ್ರವಾಗಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಅವಳು ನಿನ್ನೆ ರಾತ್ರಿ ಸಾವಿಗೆ ಶರಣಾಗಿದ್ದಾಳೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.