ಕುಂದಾಪುರ: 75 ನೇ ವಿಶ್ವ ಆರೋಗ್ಯ ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರದ ಎದುರು ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ದಿನಾಚರಣೆ

ಕುಂದಾಪುರ: 75 ನೇ ವಿಶ್ವ ಆರೋಗ್ಯ ದಿನಾಚರಣೆಯನ್ನು ಈ ದಿನ ತಾರೀಖು 07-04-2023 ರಂದು ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರದ ಎದುರು ಆಚರಿಸಲಾಯಿತು. ಉಚಿತ ಆರೋಗ್ಯ ತಪಾಸಣೆ ಈ ಪ್ರಯುಕ್ತ ಆಯೋಜಿಸಲಾಯಿತು. 133 ಜನ ಶಿಭಿರಾರ್ಥಿ ಗಳು ಇದರ ಪ್ರಯೋಜನ ಪಡೆದರು. ಈ ಕಾರ್ಯ ಕ್ರಮವನ್ನು ಖ್ಯಾತ ವೈದ್ಯರಾದ ಡಾ. ಎ. ವಸಂತ ಶೆಟ್ಟಿಯವರು ಉದ್ಘಾಟಿಸಿದರು ಮತ್ತು ರೆಡ್ ಕ್ರಾಸ್ ಸಂಸ್ಥೆ ಯ ದೈನಂದಿನ ಕಾರ್ಯಕ್ರಮ ವನ್ನು ಕೊಂಡಾಡಿದರು. ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ ವಂದಿಸಿದರು. ಕಾರ್ಯಕ್ರಮ ದಲ್ಲಿ ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಗಣೇಶ್ ಆಚಾರ್ಯ, ಎ. ಮುತ್ತಯ್ಯ ಶೆಟ್ಟಿ ಫಾರ್ಮೆಸಿಸ್ಟ್ ಬಿ. ಎಮ್ ಚಂದ್ರಶೇಖರ ಹಾಗೂ ಸಿಭಂದಿಗಳು ಉಪಸ್ಥಿತರಿದ್ದರು.