ಕೋವಿಡ್ ಲಸಿಕೆ ಪಡೆದಿದ್ದ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಕೋವಿಡ್ ಸೋಂಕು

ಕುಂದಾಪುರ: ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಇತ್ತೀಚೆಗಷ್ಟೇ ಕೋವಿಡ್ ಲಸಿಕೆ ಪಡೆದಿದ್ದ ಅವರು ಜವಾಬ್ದಾರಿಯುತ ನಾಗರಿಕರು ಕೋವಿಡ್ ಲಸಿಕೆ ಪಡೆಯಬೇಕೆಂದು ಕೇಳೊ ಕೊಂಡಿದ್ದರು  ಅದರೆ ಕೋವಿಡ್ ಲಸಿಕೆ ಪಡೆದಿದ್ದ ಇವರಿಗೇ  ಕೊರೋನಾ ಸೋಂಕಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದರಿಂದ ಇದೀಗ ಕೋವಿಡ್ ಲಸಿಕೆಯ ಅರ್ಹತೆ ಮೇಲೆ ಅನುಮಾನ ಮೂಡಿದೆ.

     ಇದೀಗ ಕೊರೋನಾ ಸೋಂಕಿತರಾದ ಸಚಿವರು ’ನಾನು ಆಸ್ಪತ್ರೆಗೆ ದಾಖಲಾಗಿರುವುದು ಅನಿವಾರ್ಯವಾಗಿದೆ, ನನ್ನ ಅಗತ್ಯವಿದ್ದರೆ ದೂರವಾಣಿ ಮೂಲಕ ಸಂಪರ್ಕಿಸಬಹುದು ಹಾಗೆಯೆ ಒಂದೆರಡು ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದವರು ಕೋವಿಡ್ ೧೯  ಟೆಸ್ಟ್ ಮಾಡಿಸಿಕೊಳ್ಳಿ’  ಎಂದು ಮಾಧ್ಯಮದ ಮೂಲಕ ಸಚಿವರು ಮಾಹಿತಿ ನೀಡಿದ್ದಾರೆ.