

ಕೋಟ; ಯೇಸು ಕ್ರಿಸ್ತರ 2025 ರ ಜ್ಯುಬಿಲಿ ವರ್ಷಕ್ಕೆ ನಾನ ತರಹದ ಯೋಜನೆ ಮತ್ತು ಮಹೋತ್ಸ್ವಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹಮ್ಮಿಕೊಂಡಿದೆ, ಅದೇ ರೀತಿ ಉಡುಪಿ ಧರ್ಮಪ್ರಾಂತ್ಯ ಕೂಡ ಹಮ್ಮಿಕೊಂಡಿದೆ, ಅದರಲ್ಲಿ ಪ್ರತಿಯೊಂದು ಧರ್ಮಕೇಂದ್ರದಲ್ಲಿ ಅಗತ್ಯ ಅಗತ್ಯಯುಳ್ಳವರಿಗಾಗಿ ಒಂದೊಂದು ಮನೆ ನಿರ್ಮಾಣ ಮಾಡಿ ವಿತರಿಸುವ ಯೋಜನೆ ಹಮ್ಮಿಕೊಂಡಿದ್ದು. ಇದೀಗ ಉಡುಪಿ ಧರ್ಮಪ್ರಾಂತ್ಯದ, ಕುಂದಾಪುರ ವಲಯದ ಕೋಟ ಸಂತ ಜೋಸೆಫ್ ಧರ್ಮಕೇಂದ್ರದಿಂದ ಸಂತ ವಿನ್ಸೆಂಟ್ ಪಾವ್ಲ್ ಸಮಿತಿಯ ಮುಂದಾಳತ್ವದಲ್ಲಿ ಕೋಟ ಧರ್ಮಕೇಂದ್ರದ ಜನತೆಯ ಸಹಕಾರದಿಂದ, ಸಂಘ ಸಂಸ್ಥೆಗಳ ಸಹಕಾರದಿಂದ ಅನುಷ್ಟನಗೊಂಡು ಕೋಟ ಧರ್ಮಪ್ರಾಂತ್ಯದ ಧರ್ಮಗುರು ವಂ।ಸ್ಟ್ಯಾನಿ ತಾವ್ರೊ ಇವರು ಆಶ್ರೀವಚಿಸಿ ಹಸ್ತಾಂತಗೊಳಿಸಿದರು. ಈ ಯೋಜನೆ ಉಡುಪಿ ಧರ್ಮಪ್ರಾಂತ್ಯದ ಸಂಪದ ಸಂಸ್ಥೆಯ ಸಹಾಯ ಹಸ್ತವಿದ್ದು, ಇದರ ನಿರ್ದೇಶಕರಾದ ವಂ।ಧರ್ಮಗುರು ರೆಜಿನಾಲ್ಡ್ ಪಿಂಟೊ, ಕೋಟ ಧರ್ಮಕೇಂದ್ರದ ಹಿಂದಿನ ಧರ್ಮಗುರು ವಂ।ಆಲ್ಪೋನ್ಸ್ ಡಿಲೀಮಾ, ಹಾಜರಿದ್ದರು. ಈ ಸಂದರ್ಭದಲ್ಲಿ ಕೋಟ ಧರ್ಮಕೇಂದ್ರದ ಜನತೆ ಹೆಚ್ಚಿನ ಸಂಖೆಯಲ್ಲಿ ಹಾಜರಿದ್ದು, ಮನೆ ಪಡೆದ ಕುಟುಂಬಕ್ಕೆ ಶುಭಾಷಯ ಕೋರಿದರು.




