ಕೊಳತೂರು ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತದ 13 ನಿರ್ದೇಶಕರ ಸ್ಥಾನಕ್ಕೆ ಜೆ.ಡಿ.ಎಸ್. ಮತ್ತು ಕಾಂಗ್ರೆಸ್ ಬೆಂಬಲಿತರ ಜಯ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ತಾಲ್ಲೂಕಿನ ಕೊಳತೂರು ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತದ 13 ನಿರ್ದೇಶಕರ ಸ್ಥಾನಕ್ಕೆ ನಡೆದಚುನಾವಣೆಯಲ್ಲಿ ಜೆ.ಡಿ.ಎಸ್. ಬೆಂಬಲಿತ 9 ಅಭ್ಯರ್ಥಿಗಳು ಹಾಗೂ ಕಾಂಗ್ರೆಸ್ ಬೆಂಬಲಿತ 4 ಮಂದಿ ಜಯಗಳಿಸಿದ್ದಾರೆ. ಜೆ.ಡಿ.ಎಸ್. ಬೆಂಬಲಿತ 9 ಅಭ್ಯರ್ಥಿಗಳು ಅಯ್ಕೆಯಾಗಿ ಬರ್ಜರಿಜಯಬೇರಿ ಬಾರಿಸಿದೆ.
ಈ ಚುನಾವಣೆಯಲ್ಲಿಜೆ.ಡಿ.ಎಸ್. ಬೆಂಬಲಿತ ನಿರ್ದೇಶಕರುಗಳಾಗಿ ಜಿ. ನಾಗರಾಜ್, ಅನಂತಪ್ಪ, ಕೆ.ಎಂ. ಕೃಷ್ಣಪ್ಪ, ಕೆ.ಎಸ್. ಲಿಂಗಾರೆಡ್ಡಿ, ಕೆ.ಎಸ್. ವೆಂಕಟಸ್ವಾಮಿ, ಮುನಿರತ್ನಮ್ಮ, ವೆಂಕಟಮ್ಮ, ಕೃಷ್ಣಯ್ಯ ಶೆಟ್ಟಿ, ಪೆದ್ದರೆಡ್ಡಿರವರ ಮಂಜುನಾಥರೆಡ್ಡಿಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿಜೆ.ಡಿ.ಎಸ್. ಜಿಲ್ಲಾಅಧ್ಯಕ್ಷರಾದಜಿ.ಕೆ. ವೆಂಕಟಶಿವಾರೆಡ್ಡಿಯವರು, ಆಯ್ಕೆಯಾದ ಸದಸ್ಯರನ್ನು ಅಭಿನಂದಿಸಿ, ರೈತರ ಸರ್ವತೋಮುಖಅಭಿವೃದ್ದಿಗಾಗಿ ಶ್ರಮಿಸಲು ಸಲಹೆ ನೀಡಿದರು.
ಸದರಿಚುನಾವಣಾ ನೇತೃತ್ವವನ್ನುಜೆ.ಡಿಎಸ್. ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ವಿ. ರೆಡ್ಡಿ, ಮತ್ತುಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ವಿ. ನಾರಾಯಣಗೌಡ ವಹಿಸಿದ್ದರು. ಬಿಸನ್ನನವರಚಂದ್ರಶೇಕರರೆಡ್ಡಿ, ಎನ್. ರಾಮಕೃಷ್ಣಾರೆಡ್ಡಿ, ಉಪ್ಪರಪಲ್ಲಿ ಮಂಜುನಾಥ್, ವೆಂಕಟೇಶಪ್ಪ, ಆನಂದ್, ವಿಶ್ವನಾಥ್, ನಾಗರಾಜ್ ಮುಂತಾದವರಿದ್ದರು.