ಕೋಲಾ:ಅರಣ್ಯ ರಕ್ಷಣೆಗೆ ಮುಂದಾಗುವಂತೆ ಅರಣ್ಯ ಇಲಾಖೆಗೆ ಸಾರ್ವಜನಿಕರ ಒತ್ತಾಯ

ಕೋಲಾರ,ಫೆ.14: ಕಾಶಿ ವಿಶ್ವನಾಥ ದೇವಸ್ಥಾನ (ಅಂತರಗಂಗೆ) ಕೋಲಾರ ಬೆಟ್ಟದ ತಪ್ಪಲಿನಲ್ಲಿ ಬೆಳಗ್ಗೆ 5 ಗಂಟೆ ಸಮಯದಲ್ಲಿ ಯಾರೋ ಕಿಡಿಗೇಡಿಗಳು ಅರಣ್ಯಕ್ಕೆ ಬೆಂಕಿ ಹಾಕಿರುವ ಘಟನೆ ನಡೆದಿದೆ.
ಇದೇ ಮಾರ್ಗದಲ್ಲಿ ವಾಕಿಂಗ್ ತೆರಳಿದ್ದ ಕೆ.ಎನ್.ಎನ್.ಟಮೊಟೊ ಮಂಡಿ ಮಾಲೀಕರಾದ ಪ್ರಕಾಶ, ಖಾದ್ರಿಪುರ ಗ್ರಾಮ ಪಂಚಾಯಿತಿ ಸದಸ್ಯರಾದ ಲಿಂಗಪ್ಪ, ಶಿಕ್ಷಕ ಶ್ರೀರಾಮ, ವಿಧಾನಸೌಧ ರಮೇಶ್, ಮೇಸ್ತ್ರಿ ಸೀನಪ್ಪ, ಕೆ.ಎಸ್.ಆರ್.ಟಿ.ಸಿ.ರಮೇಶ್ ಸೇರಿದಂತೆ ಸ್ನೇಹಿತರು ಬೆಂಕಿಯನ್ನು ಪೂರ್ತಿಯನ್ನು ನಂದಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಮುಂದೆ ಇಂತಹ ಅವಘಡಗಳು ಮರುಕಳಿಸದಂತೆ ಸೂಕ್ತ ಕ್ರಮ ವಹಿಸಲು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.