ಕೋಲಾರ ಜಿಲ್ಲೆಯ ಹಲವು ಸಮಸ್ಯೆಗಳ ವಿಚಾರವಾಗಿ ಹೆಚ್.ಡಿ.ಕುಮಾರಸ್ವಾಮಿಗೆ ಕೆ.ಎನ್.ರವೀಂದ್ರನಾಥ್ ಮನವಿ

ಕೋಲಾರ ಸೆಪ್ಟೆಂಬರ್ 18 : ಕೋಲಾರ ಜಿಲ್ಲೆಯ ಹಲವು
ಸಮಸ್ಯೆಗಳ ವಿಚಾರವಾಗಿ ಮಾಜಿ ಮುಖ್ಯಮಂತ್ರಿ
ಹೆಚ್.ಡಿ.ಕುಮಾರಸ್ವಾಮಿರವರಿಗೆ ಸಾಮಾಜಿಕ ಕಾರ್ಯಕರ್ತ ಗೌರಿಪೇಟೆ
ಕೆ.ಎನ್.ರವೀಂದ್ರನಾಥ್ ರವರು ಮನವಿ ಸಲ್ಲಿಸಿದರು.
ಮೊದಲನೇಯದಾಗಿ ಮೇಕೆದಾಟು ಯೋಜನೆಯನ್ನು
ಅನುμÁ್ಠನಗೊಳಿಸಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ
ಕುಡಿಯುವ ನೀರನ್ನು ಪೂರೈಸಲು ಯೋಜನೆಯನ್ನು
ರೂಪಿಸಲು ಎರಡನೇಯದಾಗಿ ಕೋಲಾರ ಜಿಲ್ಲೆಗೆ ಸರ್ಕಾರಿ
ವೈದ್ಯಕೀಯ ಕಾಲೇಜು ಮತ್ತು ಸೂಪರ್ ಸ್ಪೆಷಲಿಟಿ
ಆಸ್ಪತ್ರೆಯನ್ನು ಮಂಜೂರು ಮಾಡುವ ಮತ್ತು
ಮೂರನೆಯದಾಗಿ ಕೋಲಾರ ನಗರಸಭೆಯಲ್ಲಿ 418 ವಿವಿಧ
ಹುದ್ದೆಗಳು ಮಂಜೂರಾತಿ ಇದ್ದು ಇದರಲ್ಲಿ 275 ಮಂದಿ
ಕಾರ್ಯನಿರ್ವಹಿಸುತ್ತಿದ್ದು ಬಾಕಿ ಇರುವ 143 ಹುದ್ದೆಗಳನ್ನು
ಶೀಘ್ರವಾಗಿ ತುಂಬುವಂತೆ ಕೋರಿ ಮನವಿ ಪತ್ರ ಸಲ್ಲಿಸಿದರು.
ಕೋಲಾರ ಜಿಲ್ಲೆಯ ಅಂತರ್ಜಲ ವಿಷಯುಕ್ತವಾಗಿದ್ದು ಅನೇಕ
ವಿಷಕಾರಿಯ ಲವಣಾಂಶಗಳನ್ನು, ಆರೋಗ್ಯಕ್ಕೆ
ಹಾನಿಕರವಾಗಿರುವ ಫೆÇ್ಲೀರೈಡ್, ಆ ರ್ಸಿನಿಕ್ ಮಟ್ಟಕಿಂತ ಅತಿ ಹೆಚ್ಚು
ಪ್ರಮಾಣದಲ್ಲಿ ಹೊಂದಿದ್ದು ಕುಡಿಯುಲು ಯೋಗ್ಯವಲ್ಲದಂತಾಗಿದೆ.
ಸರ್ಕಾರವು ನಿರ್ಮಿಸುತ್ತಿರುವ ನೀರು ಶುದ್ಧಿಕರಣ
ಘಟಕಗಳನ್ನು ಸಹ ಈ ಅಧಿಕ ಪ್ರಮಾಣದ ರಾಸಾಯನಿಕ ಮತ್ತು
ಲವಣಗಳ ಪರಿಣಾಮವಾಗಿ 2-3ತಿಂಗಳಲ್ಲಿಯೇ ನೀರು ಶುದ್ಧಿಕರಿಸುವ
ಪಿಲಮೆಂಟ್‍ಗಳನ್ನು ಬದಲಾಯಿಸಬೇಕಾಗಿದ ಅನಿವಾರ್ಯ
ಪರಿಸ್ಥಿತಿಯನ್ನು ಎದುರಿಸುತ್ತಿವೆ. ಖಔ ಪ್ಲಾಂಟ್‍ಗಳು ಕಡಿಮೆ
ಅವಧಿಯಲ್ಲಿಯೇ ಕೆಟ್ಟು ನಿಲ್ಲುತ್ತಿವೆ. ಇದರ ಪರಿಣಾಮವಾಗಿ ಜನರಿಗೆ
ಶುದ್ಧ ಆರೋಗ್ಯಕ್ಕೆ ಹಾನಿಕರವಲ್ಲದ ಕುಡಿಯುವ ನೀರನ್ನು
ಒದಗಿಸುವ ಈ ಯೋಜನೆ ನಿರೀಕ್ಷಿತ ಯಶಸ್ಸನ್ನು ಕಾಣದೆ. ಇದು ನದಿ
ನೀರನ್ನು ಹರಿಸಬೇಕಾಗುವ ಅನಿವಾರ್ಯತೆಯನ್ನು ಸಾರಿ ಹೇಳಿತ್ತಿದೆ.
ಸರ್ಕಾರವು ತಕ್ಷಣ ಮೇಕೆದಾಟು ಯೋಜನೆಯನ್ನು ಪ್ರಾರಂಭಿಸಿ
ಅನುμÁ್ಠನ ಗೊಳಿಸುವಂತೆ ಒತ್ತಡ ಏರಿ ಕೋಲಾರ ಮತ್ತು
ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಈ ಯೋಜನೆ ಅನುಕೂಲ ಮಾಡಲು
ಕೋರಿದರು.
ಕೋಲಾರವು ಜಿಲ್ಲಾ ಕೇಂದ್ರವಾಗಿದ್ದರೂ ಸಹ
ಸುಸಜ್ಜಿತವಾದ ಸರ್ಕಾರಿ ಸೂಪರ್ ಸ್ಪೆಷಲಿಟಿ ಆಸ್ಪತ್ರೆ ಮತ್ತು ಸರ್ಕಾರಿ
ವ್ಯದ್ಯಕೀಯ ಕಾಲೇಜು ಇಲ್ಲದ ಕಾರಣ ಇಂತಹ ರೋಗಗಳಿಗೆ
ಚಿಕಿತ್ಸೆ ಪಡಿಯಲು ಸಾಧ್ಯವಾಗುತ್ತಿಲ್ಲ. ಈ ಭಾಗದ ಶೇ.90% ಜನರು
ಹಣಕಾಸಿನಲ್ಲಿ ಸ್ಥಿತಿವಂತರಲ್ಲದ ಕಾರಣ ಖಾಸಿಗಿ ಆಸ್ಪತ್ರೆಗಳಿಗೆ ಹೋಗಿ,
ಹಣವನ್ನು ಕೊಟ್ಟು ಚಿಕಿತ್ಸೆಯನ್ನು ಪಡಿಯುವ ಸ್ಥಿತಿಯಲ್ಲಿ
ಇರುವುದಿಲ್ಲ.ಕೋಲಾರದ ಹೊರವಲಯದಲ್ಲಿ ಸರ್ಕಾರದ
ಕಮಲಾ ನೆಹರು ಸಾನಿಟೋರಿಯಂ ಎಂಬ ಕ್ಷಯ ಆಸ್ಪತ್ರೆಅನ್ನು
ಸುಮಾರು 50 ಎಕ್ಕರೆ ಜಾಗದಲ್ಲಿ ನಿರ್ಮಿಸಲು ಸರ್ಕಾರದ ಗಮನಕ್ಕೆ
ವಿಧಾನ ಮಂಡಲದ ಅಧಿವೇಶನದಲ್ಲಿ ತರುವಂತೆ ಕೋರಿದರು.
ಕೋಲಾರದಲ್ಲಿ ಸುಮಾರು ಎರಡು ಲಕ್ಷದಷು ಜನರು
ವಾಸವಾಗಿದ್ದು 35 ವಾರ್ಡ್‍ಗಳು ಇರುತ್ತವೆ. ನಗರವು ಅತಿ ವೇಗವಾಗಿ
ಬೆಳಯುತ್ತಿದ್ದು ನಗರಸಭೆಯಲ್ಲಿ ಅಗತ್ಯ ಸಿಬ್ಬಂದಿಯ
ಕೊರತೆ ಇರುವದರಿಂದ ಮೂಲಭೂತ ಸಮಸ್ಯೆಗಳಾದ ರಸ್ತೆ,
ದೀಪಗಳು, ಒಳಚರಂಡಿ ವ್ಯವಸ್ಥೆ, ಡ್ರೈನೇಜ್, ಕುಡಿಯುವ
ಹಾಗೂ ದಿನಬಳಕೆಯ ನೀರಿನ ವ್ಯವಸ್ಥೆ, ರಸ್ತೆ ಹಾಗೂ

ಬಡಾವಣೆಗಳಲ್ಲಿನ ಕಸ ವಿಲೇವಾರಿ ಸರಿಯಾಗಿ ಆಗದೇ ನಿವಾಸಿಗಳು
ಪರೀತಪ್ಪಿಸುವಂತೆ ಆಗಿದೆ. ಅಧಿಕಾರಿಗಳು, ಆಡಳಿತ ಸಿಬ್ಬಂದಿ, ಗ್ರೂಪ್ ‘ಸಿ ‘
ಮತ್ತು ‘ ಡಿ ‘ ಗ್ರೂಪ್ ನೌಕರರನ್ನು ಒಳಗೊಂಡಂತೆ ಒಟ್ಟು 418
ಹುದ್ದೆಗಳ ಮಂಜೂರಾತಿ ಇದ್ದು, ಇದರ ಪೈಕಿ 275 ಹುದ್ದೆಗಳ
ಭರ್ತಿಯಾಗ್ಗಿದು 143 ಹುದ್ದೆಗಳು ಖಾಲ್ಲಿ ಇರುತ್ತವೆ. ಎಲ್ಲಾ
ಅವಲೋಕಿಸಿ ಖಾಲ್ಲಿ ಇರುವಂತಹ ಎಲ್ಲಾ 143 ಹುದ್ದೆಗಳುನ್ನು
ತಕ್ಷಣ ಭರ್ತಿ ಮಾಡಲು ಸರ್ಕಾರದ ಗಮನ ಸೆಳೆಯಲು ಕ್ರಮ
ತೆಗೆದುಕೊಂಡು ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದ್ದು
ಸಾರ್ವಜನಿಕರ ಹಿತದೃಷ್ಟಿಯಿಂದ ಮನವಿ ಸಲ್ಲಿಸುತ್ತಿರುವುದಾಗಿ
ತಿಳಿಸಿದ್ದಾರೆ.