

ಕುಂದಾಪುರ, ಜೂ.13: ಕುಂದಾಪುರ ವಲಯದ ಹೊಸಂಗಡಿ ಸಮೀಪದ ಕೆರೆಕಟ್ಟೆ ಸಂತ ಅಂತೋನಿ ಪುಣ್ಯ ಕ್ಷೇತ್ರದ ವಾರ್ಷಿಕ ಮಹಾಹಬ್ಬವನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಅವರ ನೇತ್ರತ್ವದಲ್ಲಿ ದಿವ್ಯ ಬಲಿದಾನವನ್ನು ಅರ್ಪಿಸುವ ಮೂಲಕ ಆಚರಿಸಲಾಯಿತು. ಈ ಹಬ್ಬವು ‘ನಾವು ಭರವಸೆಯ ಯಾತ್ರಿಕರಾಗೋಣ’ ಧ್ಯೇಯ ವಾಕ್ಯದೊಂದಿಗೆ ಆಚರಿಸಲಾಯಿತು. “ಸಂತ ಅಂತೋನಿಯವರು ಬಹಳ ಪ್ರಭಾವ ಶಾಲಿ ಸಂತರು, ಅವರಿಂದ ನಡೆಯುವ ಪವಾಡಗಳಿಗೆ ಇತಿಮಿತಿಯಿಲ್ಲ, ಬಹಳಸ್ಟು ಅವರು ಬಹಳಸ್ಟು ಭಕ್ತರನ್ನು ಹೊಂದಿದ್ದಾರೆ, ಸಂತ ಅಂತೋನಿಯವರು ಯೇಸುಕ್ರಿಸ್ತರ ಮೇಲೆ ಬಹಳ ಭರವಸೆ ಇಟ್ಟು ಪ್ರಾರ್ಥಿಸುತ್ತಾರೆ, ಸಂತ ಅಂತೋನಿಯವರಲ್ಲಿ, ಅನನ್ಯ ವಿಧೇಯತೆ, ಸಹಿಷ್ಣತೆ, ನಮ್ರತೆ, ಬಡತನದ ಜೀವನ ಕ್ರಮ ಈ ಉದ್ದಾತ ಗುಣಗಳನ್ನು ಹೊಂದಿದ್ದರು. ಅವರೊಬ್ಬ ಪ್ರಸಿದ್ದ ಪ್ರಸಂಗಕರ್ತರಾಗಿದ್ದರು. ಅವರ ಪ್ರಸಂಗಗಳಿಂದ ಅನೇಕರು ಪರಿವರ್ತನೆ ಹೊಂದಿ ದೇವರಲ್ಲಿ ಮರಳಿದರು, ನಾವೂ ಕೂಡ ದೇವರ ವಾಕ್ಯಗಳನ್ನು ಒದಿ, ಅದರಂತೆ ಉತ್ತಮ ಜೀವನ ಸಾರೋಣ’ ಎಂದು ಹೇಳುತ್ತಾ ಸಂತ ಅಂತೋನಿಯವರ ಹೆಸರಿನಲ್ಲಿ ಸಿದ್ದವಾಗುವ ಅನಾಥಾಲಯ ಈ ವರ್ಷದ ಅಂತ್ಯದೊಳಗೆ, ೬೦ ಜನ ಆನಾಥರಿಗೆ ಆಶ್ರಯ ಊಟ ತಿಂಡಿ ಎಲ್ಲವನ್ನು ಉಚಿತವಾಗಿ ನೀಡುವ ೬೦ ಜನರಿಗಾಗುವಸ್ಟು ಸಾಮರ್ಥ್ಯ ಉಳ್ಳ ಈ ಆಶ್ರಮ ಸಂಪೂರ್ಣಗೊಳಿಸಲು ಚಿಂತಿಸಿದ್ದೇವೆ, ಆಮೇಲೆ ಇಲ್ಲಿ ಸಣ್ಣ ದೇವಾಲಯ ಇದೆ, ಅದು ಭಕ್ತಾಧಿಗಳ ಅನುಕೂಲಕ್ಕೆ ಹಾಗೂ ಪ್ರಾರ್ಥನ ಚಟುವಟಿಕೆಗಳಿಗೆ ಅಡಚಣೆ ಇದೆ, ಅದಕ್ಕಾಗಿ ನೂತನ ಚರ್ಚನ್ನು ನಿರ್ಮಿಸುವ ಯೋಜನೆ ಇದೆ, ಇದಕ್ಕೆಲ್ಲ ಆರ್ಥಿಕ ಸಹಾಯ ಅಗತ್ಯವಿದೆ, ಹಾಗಾಗಿ ಎಲ್ಲರ ದಾನ ಅಗತ್ಯವಿದೆ, ಹೂವು ಅಲ್ಲದಿದ್ದರೂ ಎಸಳಾದರೂ ನೀಡಿ ಸಹಕರಿಸಬೇಕು” ಕೇಳಿಕೊಂಡರು. ಈ ಸಂದರ್ಭದಲ್ಲಿ ಅವರು ‘ಅಹ್ಮಾದವಾದ್ ನಲ್ಲಿ ವಿಮಾನ ದುರಂತಲ್ಲಿ ಮಡಿದವರಿಗೆ ಶಾಂತಿ ಮತ್ತು ಅವರ ಕುಟುಂಬದವರಿಗೆ ಸಾಂತಾನ್ವನ್ನು ಕೋರಿದರು.
ಮುಖ್ಯ ಪ್ರಸಂಗ ಕರ್ತಾರಾಗಿ ಧರ್ಮಗುರು ವಂ।ವಿರೇಶ್ ವಿಕ್ಟರ್ ಮೊರಾಸ್ “ನಿನ್ನೆಯ ದಿನ ವಿಮಾನವೊಂದು ಅಪಘಾತಕ್ಕೆ ಇಡಾಗಿ ಹಲವಾರು ಮಂದಿ ಮ್ರತರಾದರು, ಹೀಗೆ ನಮ್ಮ ದಿನ ನಿತ್ಯದ ಜೀವನದಲ್ಲಿ ಅವಘಡ ದುರಂತಗಳು ಆಗುತ್ತೀರುತ್ತವೆ, ನಮ್ಮಲ್ಲಿಯೂ ಕಶ್ಟ ನಶ್ಟ, ರೋಗ, ಸಾವು ನೋವುಗಳು ಸಂಭವಿಸಿತ್ತವೆ, ಆವಾಗ ನಾವು ದೇವರು ಇದ್ದಾರೋ ಎಂಬ ಅಪಭರವಸೆ ನಮಗಾಗುತ್ತದೆ, ಆದರೆ ಇದೆಲ್ಲವೂ ನಮಗೆ ಅಧ್ಯಾತ್ಮಿಕತೆಗೆ ಒಳಗಾಗಲು ಪ್ರೇರೆಪಿಸುತ್ತವೆ. ನಾವು ಈ ಪ್ರಪಂಚದ ಜೀವನದಲ್ಲಿ ಎಸ್ಟು ಉನ್ನತ ಮಟ್ಟಕ್ಕೆ ಏರಿದರೂ, ಒಂದಲ್ಲ ಒಂದು ದಿವಸ ಈ ಪ್ರಪಂಚವನ್ನು ಬಿಟ್ಟು ಹೋಗಲೇಬೇಕು, ಅದಕ್ಕೆ ನಾವು ಸಿದ್ದವೀರಬೇಕು, ನಮ್ಮ ಜೀವನದಲ್ಲಿ ಬರುವ ಕಶ್ಟ ನಶ್ಟ, ರೋಗ ರ್ರುಜಿನಗಳು ನಿವಾರಣೆ ಆಗದಿದ್ದಲ್ಲಿ ನೀವು ಭರವಸೆಯನ್ನು ಕಳೆದುಕೊಳ್ಳಬಾರದು, ದೇವರು ನಮಗೆ ವಾಗ್ದಾನ ನೀಡಿದ್ದಾನೆ, ಪ್ರತಿಯೊಬ್ಬರಿಗೂ ನನ್ನಲ್ಲಿ ಭರವಸೆಯ ವಿವಿಧ ಯೋಜನೆಗಳಿವೆ, ಅದು ನಿಮಗೆ ಪರಲೋಕದಲ್ಲಿ ಸಿಗಲಿವೆ. ಸಂತ ಅಂತೋನಿಯವರಲ್ಲಿ ಭರವಸೆ ಇಟ್ಟು ನೀವು ಇಲ್ಲಿಗೆ ಬಂದಿದ್ದಿರಿ, ಅದು ದೊರಕಬಹುದು, ಆದರೆ ದೊರಕದೆ ಇರಬಹುದು, ಅಂದರೆ ಅದು ಸಿಗಲಿಲ್ಲ ಅಂದರೆ, ಅಂತಹ ನಿವೇದನೆ, ನಮಗೆ ದೇವರ ಯೋಜನೆಯಲ್ಲಿ ಇಲ್ಲ ಎಂದು ತಿಳಿದು, ದೇವರ ಇಚ್ಚೆಗೆ ಶರಣಾಗಬೇಕು’ ಎಂದು ಸಂದೇಶ ನೀಡಿದರು.
ನೂತನವಾಗಿ ಆಯ್ಕೆಯಾದ ಕುಂದಾಪುರ ವಲಯದ ಪ್ರಧಾನರು, ಭಾಗ್ಯವಂತೆ ರೋಜರಿ ಮಾತಾ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಪಾವ್ಲ್ ರೇಗೊ ಹಬ್ಬದ ಶುಭಾಷಯಗಳನ್ನು ಕೋರಿದರು. ಉಡುಪಿ ಧರ್ಮಪ್ರಾಂತ್ಯದ ಅ|ವಂ| ವಿಕಾರ್ ಜನರಲ್ ಅ|ವಂ|ಮೊನ್ಸಿಂಜ಼ೊರ್ ಫರ್ಡಿನಂಡ್ ಗೊನ್ಸಾಲ್ವಿಸ್, ಉಡುಪಿ ಧರ್ಮಪ್ರಾಂತ್ಯದ ನೂತನ ಛಾನ್ಸಲರ್ ಅ।ವಂ।ಸ್ಟೀವನ್ ಡಿಸೋಜಾ, ಕುಂದಾಪುರ ವಲಯದ ಎಲ್ಲ ಧರ್ಮಕೇಂದ್ರದ ಧರ್ಮಗುರುಗಳು, ಅತಿಥಿ ಧರ್ಮಗುರುಗಳು, ಬಲಿದಾನದಲ್ಲಿ ಭಾಗಿಯಾದರು.
ದಾನಿಗಳಿಗೆ, ಬಲಿಪೂಜೆ ನಿವೇದನೆ ಮಾಡಿಕೊಂಡವರಿಗೆ ಮುಂಬತ್ತಿ ನೀಡಿ ಗೌರವಿಸಲಾಯಿತು. ಆಗಮಿಸಿದ ಎಲ್ಲಾ ಭಕ್ತಾಧಿಗಳಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಧರ್ಮ ಭಗಿನಿಯರು ಭಾಗಿಯಾಗಿದ್ದು ಭಕ್ತಾಧಿಗಳು ಮಳೆಯನ್ನು ಲೆಕ್ಕಿಸಿದೆ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದರು. ಕೋಟೆಶ್ವರ, ಚರ್ಚಿನ ಗಾಯನ ಮಂಡಳಿ ಭಕ್ತಿ ಗಾಯನಗಳನ್ನು ಹಾಡಿತು. ಕೋಟ ಚರ್ಚಿನವರು ಬಲಿದಾನದ ಪ್ರಾರ್ಥನ ವಿಧಿಯನ್ನು ನಡೆಸಿಕೊಟ್ಟರು.
ಕೆರೆಕಟ್ಟೆ ಸಂತ ಅಂತೋನಿ ಪುಣ್ಯ ಕ್ಷೇತ್ರದ ರೆಕ್ಟರ್ ವಂ|ಸುನೀಲ್ ವೇಗಸ್ ವಂದನೆ ಸಲ್ಲಿಸಿದರು.
ಸಂಜೆ ಧರ್ಮಗುರು ವಂ।ವಿರೇಶ್ ವಿಕ್ಟರ್ ಮೊರಾಸ್ ಇವರು ಕನ್ನಡದಲ್ಲಿ ಬಲಿದಾನ ಮತ್ತು ಪ್ರಾಥನ ವಿಧಿಯನ್ನು ನಡೆಸಿಕೊಟ್ಟರು.































































































