ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟ ಧಾರ್ಮಿಕ ಆಚರಣೆಗೆ ಅವಕಾಶವಿಲ್ಲ ಮದುವೆಗೆ 200 ಅಂತ್ಯಕ್ರಿಯೆಗೆ 25 ಜನರಿಗೆ ಅವಕಾಶ

JANANUDI.COM NETWORK

ಬೆಂಗಳೂರು: ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೊರೋನ ಪ್ರಕರಣಗಳು ಹೆಚ್ಚುತ್ತಿದ್ದು, ಸೋಂಕು ಹರಡುವುದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಗುಂಪು ಸೇರುವ ಕಾರ್ಯಕ್ರಮಗಳಿಗೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ.

ತೆರೆದ ಪ್ರದೇಶಗಳಲ್ಲಿ ನಡೆಯುವ ಮದುವೆ ಸಮಾರಂಭಗಳಲ್ಲಿ 200 ಜನ ಮತ್ತು ಕಲ್ಯಾಣ ಮಂಟಪದಂತಹ ಒಳಾಂಗಣಗಳಲ್ಲಿ ಮದುವೆ ಕಾರ್ಯಕ್ರಮಕ್ಕೆ 100 ಜನರ ಮಿತಿ ಹೇರಲಾಗಿದೆ.

ಜನ್ಮದಿನ ಮತ್ತು ಇತರೆ ಆಚರಣೆಗಳಿಗೆ ತೆರೆದ ಪ್ರದೇಶದಲ್ಲಿ 50 ಜನರ ಮಿತಿ ಮತ್ತು ಒಳಾಂಗಣ ಕಾರ್ಯಕ್ರಮಕ್ಕೆ 25 ಜನರ ಮಿತಿ ಹೇರಲಾಗಿದೆ.

ಧಾರ್ಮಿಕ ಆಚರಣೆಗೆ ಅವಕಾಶ ಇಲ್ಲ

ನಿಧನರಾದವರ ದರ್ಶನದಲ್ಲಿ 50 ನರಿಗೆ ಅವಕಾಶ, ಅಂತ್ಯಕ್ರಿಯೆಯಲ್ಲಿ 23 ಜನರಿಗೆ ಮಾತ್ರ ಅವಕಾಶ

ಇತರ ಕಾರ್ಯಕ್ರಮಗಳಲ್ಲಿ 50ಜನರಿಗೆಸೇರಲು ಮಾತ್ರ ಅವಕಾಶ