ಮಕ್ಕಳ ಹೃದಯದಲ್ಲಿ ಕನ್ನಡ ಸಂಸ್ಕ್ರತಿಯನ್ನು ಬಿತ್ತಬೇಕು. ಕನ್ನಡ ಪ್ರೀತಿ ಅರಳುವಂತೆ ಮಾಡಬೇಕು:ಸಿ.ಸೋಮಶೇಖರ

ಶ್ರೀನಿವಾಸಪುರ: ಮಕ್ಕಳ ಹೃದಯದಲ್ಲಿ ಕನ್ನಡ ಸಂಸ್ಕøತಿಯನ್ನು ಬಿತ್ತಬೇಕು. ಕನ್ನಡ ಪ್ರೀತಿ ಅರಳುವಂತೆ ಮಾಡಬೇಕು ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ.ಸೋಮಶೇಖರ ಹೇಳಿದರು.
ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಆತ್ಮಶ್ರೀ ಕನ್ನಡ ಸಾಂಸ್ಕøತಕ ಪ್ರತಿಷ್ಠಾನದ ವತಿಯಿಂದ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಶುಕ್ರವಾರ ಗಡಿನಾಡ ಉತ್ಸವ ಹಾಗೂ ಗಡಿಯಲ್ಲಿ ಕನ್ನಡ ಕಲರವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಂಸ್ಕøತಿಕ ಅಸ್ಮಿತತೆ ಉಂಟುಮಾಡುವುದು ಹಾಗೂ ಕನ್ನಡ ಜಾಗೃತಿ ಮೂಡಿಸುವುದು ಗಡಿ ಉತ್ಸವದ ಆಶಯವಾಗಿದೆ. ಈಗಾಗಲೆ ರಾಜ್ಯದಲ್ಲಿ 500 ಸಂಸ್ಥೆಗಳಿಗೆ ಸಾಂಸ್ಕøತಿಕ ಕಾರ್ಯಕ್ರಮ ನಡೆಸಲು ಅನುದಾನ ಬಿಡುಗಡೆ ಮಾಡಲಾಗಿದೆ. ನಾಡಿನ ಗಡಿಯಲ್ಲಿ ಕನ್ನಡ ಕಹಳೆ ಮೊಳಗಿಸಲು ಹಾಗೂ ಸಾಂಸ್ಕøತಿಕ ಉತ್ಸವ ನಡೆಸಲು ಇನ್ನೂ 400 ಸಂಸ್ಥೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಪ್ರತಿ ಕಾರ್ಯಕ್ರಮಕ್ಕೆ ಕನಿಷ್ಠ ರೂ.1 ಲಕ್ಷ ನೀಡಲಾಗುತ್ತಿದೆ ಎಂದು ಹೇಳಿದರು.
ಕನ್ನಡ ಭಾಷೆಗೆ 2000 ವರ್ಷಗಳ ಇತಿಹಾಸವಿದೆ. ಗಡಿನಾಡಲ್ಲೂ ಕನ್ನಡ ಭಾಷೆ ಗಟ್ಟಿಯಾಗಿದೆ. ಗಡಿಯಲ್ಲಿನ ಅನ್ಯ ಭಾಷೆಗಳಿಂದ ಕನ್ನಡ ಭಾಷೆಗೆ ಹಾನಿ ಉಂಟಾಗುವುದಿಲ್ಲ. ಗಡಿನಾಡಿನ ಜನರ ಹೃದಯದ ಭಾಷೆ ಕನ್ನಡವಾಗಿದೆ. ನಾಡಿನ ಯಾವುದೇ ಭಾಗವನ್ನು ಇನ್ನೊಂದು ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಹಾಗಾಗಿ ಭಾಷಾ ವಿಷಯದಲ್ಲಿ ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಹೇಳಿದರು.
ವೆಂಕಟೇಶ್ವರ ಗ್ರಾಮೀಣ ಆರೋಗ್ಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ವೈ.ವಿ.ವೆಂಕಟಾಚಲ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ಬಿ.ಗೋಪಾಲಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಗಡಿ ಭಾಗದಲ್ಲಿ ಕನ್ನಡ ಭಾಷಾಭಿವೃದ್ಧಿಗಾಗಿ ಶ್ರಮಿಸಿರುವ ನಿವೃತ್ತ ಪ್ರಾಂಶುಪಾಲ ಸಿ.ಬೈರಪ್ಪ, ನಿವೃತ್ತ ವಲಯ ಅರಣ್ಯಾಧಿಕಾರಿ ಗೋವಿಂದಯ್ಯ ಅವರಿಗೆ ಗಡಿನಾಡ ಕನ್ನಡ ಸೇನಾನಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಶಾಲಾ ಶಿಕ್ಷಕರು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ನೆನೆಪಿನ ಕಾಣಿಕೆ ನೀಡಲಾಯಿತು.
ಡಾ. ವೈ.ವಿ.ವೆಂಕಟಾಚಲ ನಿರ್ಮಾಣ ಹಾಗೂ ಡಾ. ಗುಣವಂತ ಮಂಜು ನಿರ್ದೇಶನದ ಅಂಗಾಂಗ ದಾನದ ಮಹತ್ವ ಸಾರುವ ರಾಷ್ಟ್ರ ಪ್ರಶಸ್ತಿ ಪುರಸ್ಕøತ ಪುಣ್ಯವತಿ ಕಿರುಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.
ಗೊವಿಂದಹಳ್ಳಿ ಕೃಷ್ಣೇಗೌಡ ಅಧ್ಯಕ್ಷತೆಯಲ್ಲಿ ಸಾಹಿತಿ ಆರ್.ಚೌಡರೆಡ್ಡಿ, ಉಪನ್ಯಾಸಕ ಎನ್.ಶಂಕರೇಗೌಡ ಅವರಿಂದ ವಿಚಾರ ಗೋಷ್ಠಿ ಏರ್ಪಡಿಸಲಾಗಿತ್ತು. ಸಾಹಿತಿ ಸ.ರಘುನಾಥ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಏರ್ಪಡಿಸಲಾಗಿತ್ತು. ಲಕ್ಷ್ಮೀಗೌಡ, ವಿ.ರಾಧಾಕೃಷ್ಣ, ಎಂ.ಪ್ರಸನ್ನಕುಮಾರ್, ಎಸ್.ಅನೀಫ್ ಸಾಬ್, ಕೆ.ವೇಣುಗೋಪಾಲ್ ಕಾವ್ಯ ವಾಚನ ಮಾಡಿದರು.
ಶಾಲಾ ಮಕ್ಕಳ ಬಳಕೆಗಾಗಿ ಡಾ. ವೈ.ವಿ.ವೆಂಕಟಾಚಲ ನಿರ್ಮಿಸಿಕೊಟ್ಟ ಕೈ ತೊಳೆಯುವ ನೀರಿನ ಘಟಕ ಲೋಕಾರ್ಪಣೆ ಮಾಡಲಾಯಿತು. ಎಂ.ಅರುಣ್ ಕುಮಾರ್ ನಿರ್ದೇಶನದಲ್ಲಿ ಸಂಗೊಳ್ಳಿ ರಾಯಣ್ಣ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು.
ಮೆರವಣಿಗೆಳ: ಗ್ರಾಮದಲ್ಲಿ ಭುವನೇಶ್ವರಿ ಭಾವಚಿತ್ರ ಮರವಣಿಗೆ ಏರ್ಪಡಿಸಲಾಗಿತ್ತು. ಮೆರವಣಿಗೆಯಲ್ಲಿ ಕೀಲು ಕುದುರೆ ಮತ್ತಿತರ ಜಾನಪದ ನೃತ್ಯಗಳು ಜನರ ಗಮನ ಸೆಳೆದವು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ.ಸೋಮಶೇಖರ ಅವರ ನೇತೃತ್ವದಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಆತ್ಮಶ್ರೀ ಕನ್ನಡ ಸಾಂಸ್ಕøತಕ ಪ್ರತಿಷ್ಠಾನದ ಅಧ್ಯಕ್ಷ ಡಾ. ಗುಣವಂತ ಮಂಜು, ಡಾ. ವೈ.ಸಿ.ಬೀರೇಗೌಡ, ಮುಖ್ಯ ಶಿಕ್ಷಕ ಕೆ.ಆರ್.ಶ್ರೀನಿವಾಸಲು, ಸಾಹಿತಿ ಅಕ್ಬರ್ ಪಾಷ, ಲಲಿತಾ ರಾಮಲಿಂಗಾರೆಡ್ಡಿ, ಗೌತಮಿ ಮುನಿರಾಜು, ಪದ್ಮ, ಶಾರದಾ, ಶಿವಾನಂದ, ನೂರುಲ್ಲಾ, ಜಯರಾಂ, ಶ್ರೀನಿವಾಸರೆಡ್ಡಿ, ಡಾ. ಗುರುಮಹೇಶ್, ಚಿತ್ರ ನಟಿ ಪ್ರೇಮಲತಾ ಇದ್ದರು.