ಬೆಳ್ಮಣ್ಣು ಜೇಸಿಐ : ಜೇಸಿ ಸಪ್ತಾಹ ಸಮಾರೋಪ, ಪ್ರಶಸ್ತಿ ಪ್ರಧಾನ, ಪೂರ್ವಾಧ್ಯಕ್ಷರುಗಳ ಸಮ್ಮಿಲನ, ಜೇಸಿ ಕುಟುಂಬೋತ್ಸವ

ವರದಿ:  ವಾಲ್ಟರ್ಮೊಂತೇರೊ, ಬೆಳ್ಮಣ್ಣ

ಭಾರತೀಯ ಜೇಸಿಐನ ವಲಯ 15ರ 41 ವರ್ಷಗಳ ಸುದೀರ್ಘ ಇತಿಹಾಸವುಳ್ಳ ಜೇಸಿಐ ಬೆಳ್ಮಣ್ಣು ಘಟಕದ ಜೇಸಿ ಸಪ್ತಾಹ ಸಮಾರೋಪ, ಪ್ರಶಸ್ತಿ ಪ್ರಧಾನ, ಪೂರ್ವಾಧ್ಯಕ್ಷರುಗಳ ಸಮ್ಮಿಲನ, ಜೇಸಿ ಕುಟುಂಬೋತ್ಸವವು ಬೆಳ್ಮಣ್ಣು ಪಂಚಾಯತ್ ಸಭಾಂಗಣದಲ್ಲಿ ಘಟಕಾಧ್ಯಕ್ಷ ಕೃಷ್ಣ ಪವಾರ್ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಜೇಸಿಐ ವಲಯಾಧ್ಯಕ್ಷೆ ಸೌಜನ್ಯ ಹೆಗ್ಡೆ, ಪೂರ್ವವಲಯಾಧ್ಯಕ್ಷ ಹರಿಶ್ಚಂದ್ರ ಅಮೀನ್, ವಲಯ ಉಪಾಧ್ಯಕ್ಷ ಸತ್ಯನಾರಾಯಣ ಭಟ್, ವಲಯದ ವ್ಯವಹಾರ ವಿಭಾಗದ ಅಧ್ಯಕ್ಷ ಸಮದ್ ಖಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಜೇಸಿಐ ರಾಷ್ಟ್ರೀಯ ತರಬೇತುದಾರ, ಪೂರ್ವವಲಯಾಧ್ಯಕ್ಷ ರಾಜೇಂದ್ರ ಭಟ್ ಅಭಿನಂದನಾ ಭಾಷಣ ಮಾಡಿದರು.
ಬೆಳ್ಮಣ್ಣು ಜೇಸಿಐ ಘಟಕದ ಸದಸ್ಯ ರಾಜೇಶ್ ಕುಲಾಲ್ ಅವರಿಗೆ ಕಮಲ ಪತ್ರ ಪ್ರಶಸ್ತಿ, ಉದ್ಯಮಿ ಪೆರಲ್‍ಪಾದೆ ನಿತ್ಯಾನಂದ ಶೆಟ್ಟಿ ಅವರಿಗೆ ಖಿಔಃIP  ಪ್ರಶಸ್ತಿ, ಯುವ ಉದ್ಯಮಿ ಬೆಳ್ಮಣ್ಣು ಗೋಪಾಲಕೃಷ್ಣ ಶೆಣ್ಯೆ ಅವರಿಗೆ  ಖಿಔಙI ಪ್ರಶಸ್ತಿ, ಯಕ್ಷಗಾನ ಕಲಾವಿದ ಸಂದೀಪ್ ಪುತ್ರನ್ ಅವರಿಗೆ ಕಲಾ ಸೌರಭ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾರಂಭದ ವೇದಿಕೆಯಲ್ಲಿ ಕಾರ್ಯದರ್ಶಿ ಅಬ್ಬನಡ್ಕ ಸತೀಶ್ ಪೂಜಾರಿ, ಕಾರ್ಯಕ್ರಮ ನಿರ್ದೇಶಕ ಸಂದೀಪ್ ಕುಲಾಲ್, ಜೇಜೇಸಿ ಅಧ್ಯಕ್ಷ ಪ್ರಥಮ್ ಮಲ್ಯ, ಜೇಸಿರೇಟ್ ಅಧ್ಯಕ್ಷೆ ಮಾಯಾ ಸಿ. ರಾವ್, ಘಟಕದ ಪೂರ್ವಾಧ್ಯಕ್ಷರುಗಳು ಹಾಗೂ ಸದಸ್ಯರು ಉಪಸ್ಥಿತಿತರಿದ್ದರು.