ಜನ ಔಷಧಿ ಸಪ್ತಾಹ: ಮಹಿಳಾ ಶಕ್ತಿ ಅಭಿಯಾನ.

JANANUDI.COM NETWORK


ಕುಂದಾಪುರ, ಫೆ:3 ಜನ ಔಷಧಿ ಸಪ್ತಾಹದ ಮೂರನೇ ದಿನವಾದ ಇಂದು 03-03-2022 ರಂದುಮಹಿಳಾ ಶಕ್ತಿ ಅಭಿಯಾನ. ಜನ ಔಷಧಿ ಫಾರ್ಮಸಿ ಎದುರು ಸುಮಾರು 50 ಮಂದಿ ಮಹಿಳೆಯರಿಗೆ ಈ ಕಾರ್ಯವನ್ನು ಆಯೋಜಿಸ ಲಾಯಿತು.
ರೆಡ್ ಕ್ರಾಸ್ ಸಭಾಪತಿ ಶ್ರೀ ಎಸ್. ಜಯಕರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಪುರಸಭೆಯ ಅಧ್ಯಕ್ಷರಾದ ವೀಣಾ ಭಾಸ್ಕರ್ ಮೆಂಡನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಭಾಷಣ ಮಾಡಿದರು.
ಮುಖ್ಯ ಅತಿಥಿ ಗಳಾಗಿ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ರಾಜೇಶ್ವರಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಯಾಗಿ ಡಾ. ರಶ್ಮಿ ಕುಂದಾಪುರ (community medicine AIIMS Hyderabad ) ಇವರು ಉಪಸ್ಥಿತರಿದ್ದ ಮಹಿಳೆಯರಿಗೆ ರಕ್ತ ಹೀನತೆ ಮತ್ತು ಕೆಲ್ಸಿಯಮ್ ಡೆಫೀಶಿಯನ್ಶಿ ವಿಷಯದಲ್ಲಿ ಮಾಹಿತಿ ನೀಡಿದರು. ಜನ ಔಷಧಿ ಉತ್ಪನ್ನ ಗಳ ಕುರಿತು ಮಾಹಿತಿ ನೀಡಿದರು. ಎಲ್ಲಾ ಉಪಸ್ಥಿತ ಮಹಿಳೆಯರಿಗೆ ಗಿಫ್ಟ್ ಹೆಂಪರ್ ಮತ್ತು ಉಪಹಾರ ನೀಡಲಾಯಿತು.
ಕಾರ್ಯಕ್ರಮ ದಲ್ಲಿ ರೆಡ್ ಕ್ರಾಸ್ ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರು ಗಳಾದ ಗಣೇಶ್ ಆಚಾರ್ಯ, ಎ. ಮುತ್ತಯ್ಯ ಶೆಟ್ಟಿ, ಸೀತಾರಾಮ ನಕ್ಕತ್ತಾಯ, ಮತ್ತು ನಾರಾಯಣ ದೇವಾಡಿಗ ಉಪಸ್ಥಿತರಿದ್ದರು.ಕಾರ್ಯಕಾರಿ ಸಮಿತಿಯ ಸದಸ್ಯ ರಾದ ಡಾ. ಸೋನಿ ಕಾರ್ಯಕ್ರಮ ನಿರೂಪಿಸಿದರು, ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ ವಂದಿಸಿದರು.