ಪತ್ರಕರ್ತರೊಂದಿಗೆ ಸಂವಾದ: ಜಿಲ್ಲಾಧಿಕಾರಿ ಅಕ್ರಂ ಪಾಷಾ ನೀರುಪೂರೈಕೆ , ಅಭಿವೃದ್ಧಿಪರ ಆಡಳಿತ , ಶಿಕ್ಷಣ , ಆರೋಗ್ಯ ಸ್ವಚ್ಛ ಕ್ಷಣ,ಆರೋಗ್ಯಸಚತೆಗೆ ಒತ್ತು – ಭರವಸೆ

ಕೋಲಾರದಲ್ಲಿ ಪತ್ರಕರ್ತರೊಂದಿಗೆ ಸಂವಾದ ನಡೆಸಿದ ಜಿಲ್ಲಾಧಿಕಾರಿ ಅಕ್ರಂ ಪಾಷಾ ನೀರುಪೂರೈಕೆ , ಅಭಿವೃದ್ಧಿಪರ ಆಡಳಿತ , ಶಿಕ್ಷಣ , ಆರೋಗ್ಯ ಸ್ವಚ್ಛ ಕ್ಷಣ , ಆರೋಗ್ಯ ಸಚತೆಗೆ ಒತ್ತು – ಭರವಸೆ

ಕೋಲಾರ : ಕುಡಿಯುವ ನೀರಿನ ಪೂರೈಕೆ , ಅಭಿವೃದ್ಧಿ ಪರ ಆಡಳಿತಕ್ಕೆ ಆದ್ಯತೆ , ಶಿಕ್ಷಣ , ಆರೋಗ್ಯ ಕ್ಷೇತ್ರಗಳಿಗೆ ಒತ್ತು , ಸ್ವಚ್ಛತೆ ಮೂಲ ಸೌಕರ್ಯ ಕೊರತೆ ನೀಗಿಸುವ ಪ್ರಯತ್ನ , ಎಲ್ಲಾ ಇಲಾಖೆಗಳ ಖಾಲಿ ಹುದ್ದೆಗಳನ್ನು ತುಂಬಲು ಅಗತ್ಯ ಕ್ರಮವಹಿಸಲಾಗುವುದು ಎಂದು ನೂತನ ಜಿಲ್ಲಾಕಾರಿ ಅಕ್ರಂಪಾಷಾ ಹೇಳಿದರು .

ನಗರದ ತಮ್ಮ ಕಚೇರಿಯ ಸಭಾಂಗಣದಲ್ಲಿ ಪತ್ರಕರ್ತರೊಂದಿಗೆ ಸಂವಾದ ನಡೆಸಿದ ಅವರು , ತಮ್ಮ ಆಡಳಿತದ ಆದ್ಯತೆಗಳ ಕುರಿತು ವಿವರಣೆ ನೀಡಿದರು. ಕೋಲಾರ ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರು ಜನರಿಗೆ ಲಭ್ಯವಾಗದಿರುವುದು ಕುರಿತು ಗಮನಿಸಿದ್ದು , ಶುದ್ಧ ಕುಡಿಯುವನೀರು ಪೂರೈಕೆ ಮಾಡುವ ವಿಚಾರದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಕೋಲಾರ ನಗರದಸೇರಿದಂತೆ ಬಹುತೇಕ ಕೊರತೆ ಎದ್ದು ಪಟ್ಟಣಗಳಲ್ಲಿ ಸ್ವಚ್ಛತೆಯ ಕಾಣಿಸುತ್ತಿದ್ದು , ಸ್ವಚ್ಛಕಾ ಕಾರ್ಯಗಳನ್ನು ಹಂತ ಹಂತವಾಗಿ ಜಾರಿಗೆ ತರಲಾಗುವುದು , ಈ ವಿಚಾರದಲ್ಲಿ ಸಾರ್ವಜನಿಕರ ಸಹಕಾರವೂ ಅತ್ಯಗತ್ಯ ಎಂದರು. ಕೋಲಾರ ನಗರಕ್ಕೆ ವರ್ತುಲ ರಸ್ತೆ ನಿರ್ಮಾಣ ಮಾಡಬೇಕೆಂಬ ಬಗ್ಗೆ ಬಹಳ ವರ್ಷಗಳ ಬೇಡಿಕೆ ಇದ್ದು , ಈ ಬೇಡಿಕೆಯನ್ನು ಬಜೆಟ್ ನಂತರ ಈಡೇರಿಸುವ ಪ್ರಯತ್ನ ನಡೆಸಲಾಗುವುದು ಎಂದ ಅವರು , ಇದೇ ರೀತಿ ನಗರದ ಅಭಿವೃದ್ಧಿಗಾಗಿ ಹೊಸ ಯೋಜನೆಗಳನ್ನು ರೂಪಿಸಿ ಜನಪ್ರತಿನಿಗಳ ಸಹಕಾರದೊಂದಿಗೆ ಅನುಷ್ಠಾನಕ್ಕೆ ತರಲಾಗುವುದು , ಕೋಲಾರ ನಗರಕ್ಕೆ ಹೊಸರೂಪ ನೀಡಲಾಗುವುದು ಎಂದರು.

ಅಲ್ಪಸಂಖ್ಯಾತರ ಇಲಾಖೆಗೆ ಹೊಸ ರೂಪ

ಹಿಂದೆ ತಾವು ಅಲ್ಪಸಂಖ್ಯಾತರ ಆಯುಕ್ತರಾಗಿ ಕೆಲಸ ನಿರ್ವಹಿಸಿದಾಗ ರಾಜ್ಯಾದ್ಯಂತ 150 ಮೊರಾರ್ಜಿದೇಸಾಯಿ ವಸತಿ ಶಾಲೆಗಳು , 350 ಹಾಸ್ಟೆಲ್‌ಗಳು ಮತ್ತು 200 ಶಾಲೆಗಳನ್ನು ಆರಂಭಿಸಿ ಹೊಸದಾಗಿ 11 ಲಕ್ಷ ಮಕ್ಕಳಿಗೆ ಆನ್‌ಲೈನ್ ಮೂಲಕ ವಿದ್ಯಾರ್ಥಿ ವೇತನ ಖಾತೆಗೆ ತಲುಪುವಂತೆ ಮಾಡಲಾಗಿತ್ತು ಎಂದರು.

ಇದೇ ರೀತಿ ಕೋಲಾರ ಜಿಲ್ಲೆಯ ಸರಕಾರಿ ಶಾಲೆಗಳಿಗೆ ಸ್ಮಾರ್ಟ್ ಬೋರ್ಡ್ , ತರಗತಿಗಳನ್ನು ಕೊಡಿಸುವ ಮೂಲಕ , ಸ್ಮಾರ್ಟ್ ಶಿಕ್ಷಕರಿಗೆ ತರಬೇತಿ ನೀಡಿ ಪ್ರೋತ್ಸಾಹಿಸಿ ವಿವಿಧ ಶೈಕ್ಷಣಿಕ ಯೋಜನೆಗಳಿಗೆ ಒತ್ತು ನೀಡಲಾಗುವುದು ಎಂದು ವಿವರಿಸಿದರು .

ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಗೆ ಒತ್ತು

ಕೋಲಾರ ಜಿಲ್ಲೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದಕ್ಕೆ ಹೆಸರುವಾಸಿಯಾಗಿದ್ದು , ಈಗ ಕೊಂಚ ಕಡಿಮೆಯಾಗಿದೆ . ಕೋಲಾರ ಜಿಲ್ಲೆಯ ಹಿಂದಿನ ಹೆಸರನ್ನು ಉಳಿಸುವ ಸಲುವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಕುರಿತು ಯುವ ಜನತೆಗೆ ತರಬೇತಿ ಮಾಹಿತಿ ನೀಡಲಾಗುವುದು , ಮಾಹಿತಿ ನೀಡುವ ಜೊತೆಗೆ ವಿವಿಧ ಹಂತಗಳಲ್ಲಿ ಹುದ್ದೆಗಳನ್ನು ತುಂಬಲು ಉದ್ಯೋಗ ಮೇಳವನ್ನು ನಡೆಸಲಾಗುವುದು , ಸಿಎಸ್‌ಆರ್ ನಿಯನ್ನು ಬಳಸಿಕೊಂಡು ಸರಕಾರಿ ಶಾಲೆಗಳ ಸ್ವರೂಪವನ್ನೇ ಬದಲಾಯಿಸಲಾಗುವುದು ಎಂದರು .

ಅಭಿವೃದ್ಧಿಪರ ಆಡಳಿತ

ಕೋಲಾರ ಜಿಲ್ಲೆಯಲ್ಲಿ ಅಭಿವೃದ್ಧಿ ಪರ ಆಡಳಿತ ನೀಡುವುದು ತಮ್ಮ ಗುರಿಯಾಗಿದ್ದು , ತುರ್ತು ಆಗಬೇಕಾದ ಕೆಲಸಗಳನ್ನು ಪಟ್ಟಿ ಮಾಡಿಕೊಂಡು ಆದ್ಯತೆ ಮೇರೆಗೆ ಅನುಷ್ಠಾನಕ್ಕೆ ತರಲಾಗುವುದು , ಮಾಡುವ ಕೆಲಸದಲ್ಲಿ ಹಾಗೂ ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳುವ ಸಂದರ್ಭದಲ್ಲಿ ಆಗುತ್ತಾ , ಇಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳುವ ಮೂಲಕ ಅನಗತ್ಯ ವಿಳಂಬವನ್ನು ನಿವಾರಿಸಲಾಗುವುದು ಎಂದು ವಿವರಿಸಿದರು .

ಈಗಾಗಲೇ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಕುರಿತು ಆಯಾ ಮುಖ್ಯಸ್ಥರಿಗೆ ಕೋರಲಾಗಿದೆ . ಪತ್ರ ಬರೆದು ನಗರಸಭೆಗಳಲ್ಲಿ ಶೇ .70 ರಷ್ಟು ಹುದ್ದೆ ಖಾಲಿ ಇವೆ , ಕಂದಾಯ ಇಲಾಖೆಯಲ್ಲಿ 18 ಶಿರಸ್ತೇದಾರರು , 70 ಗ್ರಾಮ ಲೆಕ್ಕಿಗರ ಹುದ್ದೆಗಳು ಖಾಲಿ ಇವೆ ಎಂದು ವಿವರಿಸಿದರು . ಬಜೆಟ್ ನಂತರ ಸ್ಥಗಿತಗೊಂಡಿರುವ ಹಾಗೂ ನೆನೆಗುದಿಗೆ ಬಿದ್ದಿರುವ ಎಲ್ಲಾ ಚಾಲನೆ ಕಾಮಗಾರಿಗಳಿಗೆ ಇಲಾಖೆಯ ತುಂಬುವಂತೆ ನೀಡಲಾಗುವುದು ಎಂದು ಹೇಳಿದ ಅವರು , ಕೋಲಾರ ಎಪಿಎಂಸಿ ವಿಸ್ತರಣೆಗೆ 36 ಎಕರೆ ಜಾಗವನ್ನು ಗುರುತಿಸಲಾಗಿದ್ದು , ಅರಣ್ಯ ಇಲಾಖೆಯಿಂದ ಹಸ್ತಾಂತರಿಸಲು ಪತ್ರ ಬರೆದಿದ್ದು , ಶೀಘ್ರವೇ ನಿರ್ಧಾರವಾಗಿ ಭೂಮಿ ಸಿಕ್ಕ ನಂತರ ವಿಸ್ತರಣೆ ಕಾರ್ಯ ಮಾಡಲಾಗುವುದು ಎಂದರು . ಜಲ್ಲಿ ಕ್ರಷರ್ , ಅಕ್ರಮ ಗಣಿಗಾರಿಕೆ , ಕೆಸಿ ವ್ಯಾಲಿ ನೀರಿನ ಮೂರನೇ ಹಂತದ ಶುದ್ದೀಕರಣ , ಕೃಷಿ , ತೋಟಗಾರಿಕೆ , ಹೈನುಗಾರಿಕೆ ಮೇಲೆ ಆಗಿರುವ ಪರಿಣಾಮಗಳ ಕುರಿತು ಗಮನಹರಿಸಿ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಘೋಷಿಸಿದರು.