

ಕುಂದಾಪುರ, ಮಾ.24: ಕುಂದಾಪುರ-ಬೈಂದೂರು ತಾಲೂಕುಗಳ ಭಾವನ ಮಹಿಳಾ ಒಕ್ಕೂಟದಿಂದ ಕುಂದಾಪುರ ಸಂತ ಮೇರಿಸ್ ಪ.ಪೂ. ಕಾಲೇಜಿನ ಸಭಾಭವನದಲ್ಲಿ ಮಾ.23 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಮುಖ್ಯ ಅತಿಥಿಗಳಾದ ಕುಂದಾಪುರ ವಲಯ ಪ್ರಧಾನರಾದ ಕುಂದಾಪುರ ರೋಜರಿ ಚರ್ಚಿನ ಧರ್ಮಗುರು ಅ।ವಂ। ಪೌಲ್ ರೇಗೊ ಗಿಡಕ್ಕೆ ನೀರು ಎರೆಯುವೆ ಮೂಲಕ ಕಾರ್ಯಕ್ರಮ ಉದ್ಘಾಟಿಸಿ “ಮಹಿಳೆ ಶಕ್ತಿಯ ಸಂಕೇತ, ಪ್ರೇರಣೆಯ ಪ್ರತಿಕಾ, ಪ್ರೀತಿ ಸಹನೆ ಮತ್ತು ಧ್ರಡ ಸಂಕಲ್ಪದ ದೀಪ ಸ್ಥಂಬ, ನಿಮ್ಮ ಕನಸುಗಳನ್ನು ಹಿಂಬಾಲಿಸಿ, ನಿಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿಕೊಳ್ಳಿ’ ಎಂದು ಶುಭ ಕೋರಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕನ್ನಿಕಾ ಎಜುಕೇಶನ್ ರಿಜಿಶ್ಟರ್ ಕಂಡ್ಲೂರ್, ಇದರ ಅಧ್ಯಕ್ಷೆಯಾದ ಗೌರಿ ಆರ್. ಶ್ರೀಯಾನ್ “ಮಹಿಳೆ ಅಭಿವ್ರದ್ದಿ ಹೊಂದಲು ಉನ್ನತ ಶಿಕ್ಷಣದ ಅಗತ್ಯವಿಲ್ಲ, ಜ್ಞಾನ ಬೇಕು ಎಂದು ಹೇಳುತ್ತಾ, ತನ್ನ ಬದುಕಿನ ಚಿತ್ರಣವನ್ನು ಉಲ್ಲೇಖಿಸಿದರು. ಮಕ್ಕಳಿಗೆ ಒಳ್ಳೆಯ ವಿದ್ಯಾಬಾಸವನ್ನು ನೀಡಿದ್ದೆನೆ, ಮಹಿಳೆಯರು ಆರ್ಥಿಕ ಅಭಿವ್ರದ್ಧಿ ಹೊಂದುತ್ತಾ, ನಮ್ಮ ಮಕ್ಕಳಿಗೆ ನಮ್ಮ ಸಂಸ್ಕ್ರತಿಯನ್ನು ಕಲಿಸಿಕೊಡಬೇಕು” ಎಂದು ತಿಳಿಸಿದರು.
ಕುಂದಾಪುರ ಮತ್ತು ಬೈಂದೂರು ತಾಲೂಕುಗಳ ಭಾವನ ಮಹಿಳಾ ಒಕ್ಕೂಟದ ಅಧ್ಯಾತ್ಮಿಕ ನಿರ್ದೇಶಕರಾದ ವಂ।ವಿನ್ಸೆಂಟ್ ಕುವೆಲ್ಲೊ ಮಾತನಾಡಿ “ಮಹಿಳೆ ಸುಂದರ ಸಮಾಜ ಕಟ್ಟುವ ನಿರ್ಮಿಸುವ ಸುಂದರ ಹೂತೋಟ, ಒಂದು ಕುಟುಂಬ ಉತ್ತಮವಾಗಿ ನೆಲೆಕೊಳ್ಳಬೇಕಾದರೆ, ಹೆಣ್ಣಿನ ಅಗತ್ಯವಿದೆ,ಒಂದು ಕುಟುಂಬ ಬೆಳೆಯಬೇಕಾದರೆ, ಸಮಾಜ ಬೆಳೆಯಬೇಕಾದರೆ, ಅಲ್ಲಿ ಮಹಿಳೆಯ ಪಾತ್ರ ವಿಶೇಷವಾಗಿರುತ್ತೆ’ ಎಂದು ತಿಳಿಸಿದರು.
ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಜೂಡಿತ್ ಮೆಂಡೊನ್ಸಾ ಇವರಿಗೆ ಸನ್ಮಾನಿಸಲಾಯಿತು. ಅದಕ್ಕೆ ಉತ್ತರವಾಗಿ ”ಸ್ತ್ರೀ
ಸಬಲೀಕರಣ ಅನ್ನುವ ಬದಲು ಸ್ತ್ರೀ ಸ್ವ ಸಬಲೀಕರಣವಾಗಬೇಕು’ ಎಂದರು. ಸುಗಮ್ಯ ಉಡುಪಿ ಜಿಲ್ಲಾ ಒಕ್ಕೂಟದ ಅಧ್ಯಕ್ಷೆ ಗ್ರೆಸಿ ಕುವೆಲ್ಲೊ, ಮಾನಿನಿ ರಾಜ್ಯ ಒಕ್ಕೂಟದ ಆಧ್ಯಕ್ಷೆ ಜಾನೆಟ್ ಬಾರ್ಬೊಜಾ, ಸಂಪದ ಸಂಸ್ಥೆಯ ಸ್ಟ್ಯಾನಿ ಫೆರ್ನಾಂಡಿಸ್, ಮಾತನಾಡಿದರು. ಈ ಸಂದರ್ಭದಲ್ಲಿ ಸುಗಮ್ಯ ಸೌರ್ಹಾದ ಸಹಕಾರಿ ನಿಯಮಿತ ಉಡುಪಿ ಇದರ ಸ್ಥಾಪಕ ಅಧ್ಯಕ್ಷೆ ಪ್ರಮೀಳಾ ಡೆಸಾ,ಸುಗಮ್ಯ ಜಿಲ್ಲಾ ಒಕ್ಕೂಟ ಪತ್ರಿಕೆಯ ಸಂಪಾದಕಿ ಗ್ರೇಸಿ ಮಚಾದೊ ಸಚೇತಕರಾದ ಸಿಂತಿಯಾ ರೊಡ್ರಿಗಸ್, ಜ್ಯೋತಿ ಡಿಸೋಜಾ ಇವರು ಉಪಸ್ಥಿತರಿದ್ದರು.
ಸಾಂಸ್ಕ್ರತಿಕ ಭಾಗವಾಗಿ ಕುಂದಾಪುರ ಘಟಕದಿಂದ ಖ್ಯಾತ ನಾಟಕಗಾರರಾದ ಬರ್ನಾಡ್ ಡಿಕೋಸ್ತಾರವರ ಕಿರು ನಾಟಕ ಪ್ರದರ್ಶಿಸಿದರು. ಹಾಗೇ ಉಳಿದ ಘಟಕಗಳಾದ ಬಸ್ರೂರು, ಬೈಂದೂರು, ಪಿಯುಸ್ ನಗರ, ಪಡುಕೋಣೆ, ಗಂಗೊಳ್ಳಿ, ತ್ರಾಸಿ ಒಕ್ಕೂಟಗಳಿಂದ ನ್ರತ್ಯ, ಪ್ರಹಸನ ಹಾಡುಗಳ ಪ್ರದರ್ಶನ ನೀಡಿದರು. ಸ್ವಾಗತ ನ್ರತ್ಯವನ್ನು ಕಂಡ್ಳೂರು ಘಟಕ ಮತ್ತು ಪಡುಕೋಣೆ ಘಟಕವು ಪ್ರಾರ್ಥನೆ ಗೀತೆ ಹಾಡಿತು.
ಭಾವನ ಮಹಿಳಾ ಒಕ್ಕೂಟದ ಅಧ್ಯಕ್ಷೆ ಪ್ರೀತಿ ಫೆರ್ನಾಂಡಿಸ್ ಸ್ವಾಗತಿಸಿದರು. ಕಾರ್ಯದರ್ಶಿ ಎವ್ಲಿನ್ ಫೆರ್ನಾಂಡಿಸ್ ವರದಿ ವಾಚಿಸಿದರು. ಕೋಶಾಧಿಕಾರಿ ಟ್ರೀಜಾ ಸಿಕ್ವೇರಾ ಖರ್ಚು ವೆಚ್ಚವನ್ನು ತಿಳಿಸಿದರು. ನಿರ್ಗಮನ ಅಧ್ಯಕ್ಷೆಯಾದ ಶಾಲೆಟ್ ಡಿಸಿಲ್ವಾ ವಂದಿಸಿದರು. ಶಾಂತಿ ಆರ್.ಬರೆಟ್ಟೊ ಮತ್ತು ವಿನಯಾ ಡಿಕೋಸ್ತಾ ಕಾರ್ಯಕ್ರಮ ನಿರೂಪಿಸಿದರು.


























































